ಚಿತ್ರದುರ್ಗದಲ್ಲಿ ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ : ಎಲ್ಲೆಲ್ಲಿ ನಿಷೇಧಾಜ್ಞೆ ಜಾರಿ ?

 

ಚಿತ್ರದುರ್ಗ,(ಏಪ್ರಿಲ್.21): ನಗರದ ವಾಸವಿ, ಸಂಪಿಗೆ ಸಿದ್ದೇಶ್ವರ, ಸಂತ ಜೋಸೆಫ್, ವಿದ್ಯಾವಿಕಾಸ, ಡಾನ್ ಬೋಸ್ಕೋ ಹಾಗೂ ಚಿನ್ಮೂಲಾದ್ರಿ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ಇದೇ ಏಪ್ರಿಲ್ 21 ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ.

ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ ವ್ಯವಸ್ಥಿತವಾಗಿ ಶಾಂತಿ ಸುವ್ಯವಸ್ಥೆ ಮತ್ತು ಪಾರದರ್ಶಕತೆಯಿಂದ ನಡೆಸುವ ಹಿನ್ನಲೆಯಲ್ಲಿ ಮೌಲ್ಯಮಾಪನ ಕೇಂದ್ರಗಳಿಗೆ ಅಧಿಕೃತ ವ್ಯಕ್ತಿಗಳನ್ನು ಹೊರತುಪಡಿಸಿ, ಅನಧಿಕೃತ ವ್ಯಕ್ತಿಗಳ ಪ್ರವೇಶ ನಿಷೇಧಿಸಲಾಗಿದೆ.

ಮೌಲ್ಯಮಾಪನ ಕಾರ್ಯ ಮುಕ್ತಾಯಗೊಳ್ಳುವವರೆಗೂ ಈ ಕೇಂದ್ರಗಳ 200 ಮೀಟರ್ ಸುತ್ತಲು, ಸಿ.ಆರ್.ಪಿ.ಸಿ ಕಲಂ 144 ರಡಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ತಿಳಿಸಿದ್ದಾರೆ.

The post ಚಿತ್ರದುರ್ಗದಲ್ಲಿ ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ : ಎಲ್ಲೆಲ್ಲಿ ನಿಷೇಧಾಜ್ಞೆ ಜಾರಿ ? first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/IYe0LHE
via IFTTT

Views: 0

Leave a Reply

Your email address will not be published. Required fields are marked *