ನಾನು ಅಂದುಕೊಂಡಿದ್ದನ್ನು ಮೋದಿ ಸುಳ್ಳು‌ ಮಾಡಿದರು : ಪದ್ಮಶ್ರೀ ಪುರಸ್ಕೃತ ರಶೀದ್ ಹೀಗೆ ಹೇಳಿದ್ದೇಕೆ..?

ನವದೆಹಲಿ: ನಿನ್ನೆ ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಬೀದರ್ ನ ಬಿದರಿನ ಕಲಾವಿದ ರಶೀದ್ ಅಹ್ಮದ್ ಖಾದ್ರಿ ಅವರಿಗೂ ಪ್ತಶಸ್ತಿ ಪ್ರದಾನ ಮಾಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರು ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.

ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ರಶೀದ್, ಕಳೆದ ಹತ್ತು ವರ್ಷದಿಂದ ಪ್ರಶಸ್ತಿ ಪಡೆದುಕೊಳ್ಳಲು ನಾನು ಪ್ರಯತ್ನ ಪಡುತ್ತಿದ್ದೆಮ ಆದರೆ ಬಿಜೆಪಿ ಸರ್ಕಾರ ಆಡಳಿತಕ್ಕರ ಬಂದ ಮೇಲೆ ನನಗೆ ಇನ್ನು ಪ್ರಶಸ್ತಿ ಸಿಗಲ್ಲವೆಂದೆ ಭಾವಿಸಿದ್ದೆ. ಆದರೆ ಅದನ್ನು ಪ್ರಧಾನಿ ಮೋದಿ ಸುಳ್ಳು ಮಾಡಿದ್ದಾರೆ ಎಂದು ಪದ್ಮಶ್ರೀ ಪುರಸ್ಕೃತ ರಶೀದ್ ತಿಳಿಸಿದ್ದಾರೆ.

ಬಿಜೆಪಿ ಸರ್ಕಾರ ಮುಸ್ಲಿರಿಗೆ ಪ್ರಶಸ್ತಿ ಕೊಡಲ್ಲವೆಂದು ಭಾವಿಸಿದ್ದೆ. ಆದರೆ ಪ್ರಧಾನಿ ಮೋದಿಯವರು ನಾನು ಅಂದುಕೊಂಡಿದ್ದನ್ನು ಸುಳ್ಳು ಮಾಡಿದ್ದಾರೆ. ನನಗೆ ಪ್ರಶಸ್ತಿ‌ ನೀಡಿದ್ದಾರೆ. ಪದ್ಮಶ್ರೀ ಪ್ರಶಸ್ತಿಗೆ ಕಳುಹಿಸಿದ್ದ ನನ್ನ ಪ್ರೊಫೈಲ್ ತುಂಬಾ ಚಿಕ್ಕದಾಗಿತ್ತು. 50 ಕಲರ್ ಫೋಟೋಗಳಿದ್ದವು. ಪ್ರಶಸ್ತಿಗೆ ನನ್ನ ಆಯ್ಕೆ ಮಾಡಿದ್ದಕ್ಕಾಗಿ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಆಯ್ಕೆ‌ ಸಮಿತಿಯಲ್ಲಿ ಯಾರೆಲ್ಲ ನನ್ನನ್ನು ಆಯ್ಕೆ ಮಾಡಿದ್ದಾರೋ ಅವರೆಲ್ಲರಿಗೂ ಧನ್ಯವಾದ ಎಂದು ತಿಳಿಸಿದ್ದಾರೆ.

The post ನಾನು ಅಂದುಕೊಂಡಿದ್ದನ್ನು ಮೋದಿ ಸುಳ್ಳು‌ ಮಾಡಿದರು : ಪದ್ಮಶ್ರೀ ಪುರಸ್ಕೃತ ರಶೀದ್ ಹೀಗೆ ಹೇಳಿದ್ದೇಕೆ..? first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/JWpZYtB
via IFTTT

Views: 0

Leave a Reply

Your email address will not be published. Required fields are marked *