ರಾಯರ 353ನೇ ಆರಾಧನಾ ಮಹೋತ್ಸವ | ಚಿತ್ರದುರ್ಗದ ರಾಜಬೀದಿಗಳಲ್ಲಿ ಸಡಗರದಿಂದ ಜರುಗಿದ ಮಹಾರಥೋತ್ಸವ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. 22 : ರಾಯರ 353ನೇ ಆರಾಧನಾ ಮಹೋತ್ಸವ ಸಂಭ್ರಮ ಮನೆ ಮಾಡಿದೆ. ನಗರದ ಆನೆ ಬಾಗಿಲ ಬಳಿಯಲ್ಲಿನ ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನ ಸನ್ನಿಧಾನದ ರಾಯರ ಮಠದಲ್ಲಿ ಆ.22ನೇ ಗುರುವಾರ ಶ್ರೀ ಗುರುಸಾರ್ವಭೌಮರ ಉತ್ತರಾರಾಧನೆ ನಡೆದಿದ್ದು, ಶ್ರೀ ಗುರುಸಾರ್ವಭೌಮರ ಉತ್ತರಾರಾಧನೆ ಪ್ರಯುಕ್ತ ಮಹಾರಥೋತ್ಸವವು ಚಿತ್ರದುರ್ಗದ ರಾಜಬೀದಿಗಳಲ್ಲಿ ವಿವಿಧ ಭಜನಾಮಂಡಳಿಗಳು ಹಾಗೂ ಶ್ರೀ ಗುರುಸಾರ್ವಭೌಮರ ಭಕ್ತರೊಂದಿಗೆ ಜರುಗಿತು. ಉತ್ತರಾರಾಧನೆಯಲ್ಲಿ ಜನರ ಭಕ್ತಿ ಭಾವಕ್ಕೆ ಪರಾವಶವಾಗಿದೆ. ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳು ಮಠಕ್ಕೆ ಆಗಮಿಸಿ ರಾಯರ ದರ್ಶನ ಪಡೆದರು. ರಾಯರಿಗೆ ವಿಶೇಷ ಅಲಂಕಾರ ಮಾಡಲಾಗಿತು ಗುರುವಾರ ಸಾಯಂಕಾಲ ಶ್ರೀ ರಾಘವೇಂದ್ರ ಸ್ವಾಮಿಗಳವರ ಸ್ಮರಣೆ ರೂಪಕ, ಚಿತ್ರದುರ್ಗದ ಶ್ರೀ ಗುರುರಾಜರ ಭಕ್ತರಿಂದ ನಡೆಸಲಾಯಿತು.

ರಾಯರ ಮಠದ ಹೊರಗಡೆಯಲ್ಲಿ ಮರದಿಂದ ನಿರ್ಮಾಣ ಮಾಡಲಾದ ರಥವನ್ನು ವಿವಿಧ ರೀತಿಯ ಹೊಗಳಿಂದ ಆಲಂಕಾರವನ್ನು ಮಾಡಲಾಗಿತ್ತು. ರಥ ಹೊರಡುವುದಕ್ಕೂ ಮುನ್ನಾ ಅಲ್ಲಿ ನೆರದಿದ್ದ ಭಕ್ತಾಧಿಗಳಿಗೆ ಮಠದಿಂದ ಬಾಳೆ ಹಣ್ಣು, ತೆಂಗಿನಕಾಯಿ, ಹೂ ಹಾಗೂ ಚಿಲ್ಲರೆ ಹಣವನ್ನು ನೀಡಲಾಯಿತು. ಈ ರಥೋತ್ಸವದಲ್ಲಿ ಚಂಡೆ, ನಾಗಸ್ವಾರ, ಭಜನಾ ತಂಡಗಳು ಭಾಗವಹಿಸಿದ್ದವು ದಾರಿಯುದ್ದಕ್ಕೆನೆರೆದಿದ್ದ ಭಕ್ತಾಧಿಗಳು ರಾಯರ ಪರವಾದ ಘೋಷಣೆಗಳನ್ನು ಕೂಗುವುದರ ಮೂಲಕ ನಾಮ ಸ್ಮರಣೆಯನ್ನು ಮಾಡಿದರು. ರಾಯರ ಮಠದಿಂದ ಪ್ರಾರಂಭವಾದ ರಥೋತ್ಸವವು ಆನೆಬಾಗಿಲು, ಚಿಕ್ಕಪೇಟೆ, ಸಂತೇಪೇಟೆ ವೃತ್ತದಿಂದ ಮರಳಿ ವಾಪಾಸ್ಸು ರಾಯರ ಮಠವನ್ನುತಲುಪಿತು.

ಇದಾದ ನಂತರ ರಾಯರ ಮಠದಲ್ಲಿ ರಾಯರ ಬೃಂದಾವನಕ್ಕೆ ವಿಶೇಷವಾದ ಆಲಂಕಾರವನ್ನು ಮಾಡಲಾಗಿತ್ತು ಇದರಲ್ಲಿ ವಿಶೇಷವಾಗಿ ಹೂ ಹಾಗೂ ಹಣ್ಣುಗಳ ಆಲಂಕಾರದಲ್ಲಿ ರಾಯರು ಬೃಂದಾವನ ವಿಶೇಷವಾಗಿ ಕಾಣುತ್ತಿತು. ಇದರಲ್ಲಿ ಕಿತ್ತಳೆ, ಬಿಕ್ಕೆಹಣ್ಣು, ಆನಾನಸ್, ಮೊಸುಂಬೆ, ಧಾಳಿಂಬೆ, ಸೇಬುಗಳನ್ನು ಬಳಸಿ ಅಲಂಕಾರವನ್ನು ಮಾಡಲಾಗಿತು. ಇದರ ಮಧ್ಯದಲ್ಲಿ ರಾಯರ ಬೃಂದಾವನಕ್ಕೆ ದಾಕ್ಷಿಯಿಂದ ಮಾಡಿದ ಹಾರವನ್ನು ಹಾಕಲಾಗಿತ್ತು. ಇದರೊಂದಿಗೆ ತುಳಸಿಯನ್ನು ಸಹಾ ಬಳಕೆ ಮಾಡಲಾಗಿತ್ತು.

ಬೃಂದಾವನದ ಮುಂದಗಡೆಯಲ್ಲಿ ಶ್ರೀ ಕೃಷ್ಣನ ವಿಗ್ರಹಕ್ಕೆ ಗೂರಟೆ ಹೂ. ಮಲ್ಲಿಗೆ ಹಾಗೂ ಕಾಕಡ ಹೂಗಳಿಂದ ಆಲಂಕಾರವನ್ನು ಮಾಡಲಾಗಿತ್ತು. ಬೃಂದಾವನದ ಮೇಲೆ ಪ್ರತಿಷ್ಠಾಪನೆ ಮಾಡಲಾದ ಅಂಜನೇಯ ಸ್ವಾಮಿಯ ಬೆಳ್ಳಿ ವಿಗ್ರಹಕ್ಕೂನ ಸಹಾ ವಿವಿಧ ಹೂ ಹಾಗೂ ಹಣ್ಣುಗಳಿಂದ ಆಲಂಕಾರವನ್ನು ಮಾಡಲಾಗಿತ್ತು.

ಬೆಳಿಗ್ಗೆ ನಿರ್ಮಾಲ್ಯ ಅಷ್ಟೋತ್ತರ ಸಹಿತ ಫಲಪಂಚಾಮೃತ ಅಭಿಷೇಕ ಉತ್ಸವರಾಯರ ಪಾದಪೂಜೆ, ಕನಕಾಭಿಷೇಕ ನೈವೇದ್ಯ, ಅಲಂಕಾರ ಪಂಕ್ತಿ, ಹಸ್ತೋದಕ, ಮಹಾಮಂಗಳಾರತಿ, ತೀರ್ಥಪ್ರಸಾದ ಭಜನಾ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮ ರಜತ ರಥೋತ್ಸವ, ಸ್ವಸ್ತಿವಾಚನ, ಅಷ್ಟಾವಧಾನ, ಮಹಾ ಮಂಗಳಾರತಿ. ಕಾರ್ಯಕ್ರಮ ನಡೆಯಿತು. ಆ 23 ನೇ ಶುಕ್ರವಾರ ಶ್ರೀ ಸುಜ್ಞಾನೇಂದ್ರತೀರ್ಥರ ಆರಾಧನೆ, ಪವಮಾನ ಹೋಮ, ಸರ್ವಸಮರ್ಪಣೋತ್ಸವ ಕಾರ್ಯಕ್ರಮ ನಡೆಯಲಿದೆ. ಶುಕ್ರವಾರ ಬೆಳಿಗ್ಗೆ 11.00 ರಿಂದ ಭಜನೆ ಶ್ರೀಬ್ರಹ್ಮಚೈತನ್ಯ ಮಹಿಳಾ ಭಜನಾ ಮಂಡಳಿಯವರಿಂದ ಸಂಜೆ 5.30 ರಿಂದ 7.30ರವರೆಗೆ ಚಂಪಕ ಶ್ರೀಧರ್ ಮತ್ತು ಶಿಷ್ಯವೃಂದ ದವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಯಲಿದೆ.

Leave a Reply

Your email address will not be published. Required fields are marked *