Skip to content
  • Saturday, July 12, 2025
  • About us
  • Contact us
ಸಮಗ್ರ ಸುದ್ದಿ

ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • Horoscope
  • Home
  • Sports
  • Suryakumar Yadav: ಸೂರ್ಯಕುಮಾರ್ ಔಟಾಗಿ ಪೆವಿಲಿಯನ್​ನತ್ತ ಹೋಗುತ್ತಿದ್ದಾಗ ವಿರಾಟ್ ಕೊಹ್ಲಿ ಏನು ಮಾಡಿದ್ರು ನೋಡಿ
Sports

Suryakumar Yadav: ಸೂರ್ಯಕುಮಾರ್ ಔಟಾಗಿ ಪೆವಿಲಿಯನ್​ನತ್ತ ಹೋಗುತ್ತಿದ್ದಾಗ ವಿರಾಟ್ ಕೊಹ್ಲಿ ಏನು ಮಾಡಿದ್ರು ನೋಡಿ

May 10, 2023
samagrasuddi

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭದಲ್ಲಿ ಸತತ ಸೋಲುಂಡು ಬಳಿಕ ಭರ್ಜರಿ ಕಮ್​ಬ್ಯಾಕ್ ಮಾಡಿರುವ ಮುಂಬೈ ಇಂಡಿಯನ್ಸ್ ತಂಡ ಇದೀಗ ಪಾಯಿಂಟ್ ಟೇಬಲ್​ನಲ್ಲಿ ಮೂರನೇ ಸ್ಥಾನದಲ್ಲಿದ್ದು, ಪ್ಲೇ ಆಫರ್ ರೇಸ್​ನಲ್ಲಿ ಕಾಣಿಸಿಕೊಂಡಿದೆ.200+ ರನ್​ಗಳ ಟಾರ್ಗೆಟ್ ನೀಡಿದ್ದರೂ ಮುಂಬೈ ಇಂಡಿಯನ್ಸ್ ಸುಲಭವಾಗಿ ಜಯ ಸಾಧಿಸುತ್ತಿದೆ. ಐಪಿಎಲ್ 2023 ರಲ್ಲಿ ರೋಹಿತ್ ಶರ್ಮಾ ಪಡೆ ಈ ಸಾಧನೆಯನ್ನು ಮೂರು ಬಾರಿ ಮಾಡಿದೆ. ಮಂಗಳವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲೂ ಮುಂಬೈ 200 ರನ್​ಗಳ ಗುರಿ ಬೆನ್ನಟ್ಟಿ ಗೆದ್ದಿತು.ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಜಯ ತಂದುಕೊಡುವಲ್ಲಿ ಮುಖ್ಯ ಪಾತ್ರವಹಿಸಿದರು. ಕೇವಲ 35 ಎಸೆತಗಳಲ್ಲಿ 7 ಫೋರ್ ಹಾಗೂ 6 ಮನಮೋಹಕ ಸಿಕ್ಸರ್ ಸಿಡಿಸಿ 83 ರನ್ ಚಚ್ಚಿದರು.ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಸೂರ್ಯಕುಮಾರ್ 16ನೇ ಓವರ್​ನ ವಿಜಯ್​ಕುಮಾರ್ ಅವರ ಬೌಲಿಂಗ್​ನಲ್ಲಿ ಕೇದರ್ ಜಾಧವ್​ಗೆ ಕ್ಯಾಚ್ ನೀಡಿ ಔಟಾದರು. ಸೂರ್ಯ ಔಟಾದಾಗ ಮುಂಬೈ ಡಗೌಟ್ ಎದ್ದು ನಿಂತು ಚಪ್ಪಾಳೆ ತಟ್ಟಿತು.ಹಾಗೆಯೆ ಸೂರ್ಯಕುಮಾರ್ ಪೆವಿಲಿಯನ್​ನತ್ತ ಸಾಗುತ್ತಿರುವಾಗ ಆರ್​ಸಿಬಿ ತಂಡದ ವಿರಾಟ್ ಕೊಹ್ಲಿ ತಬ್ಬಿಕೊಂಡು ಶುಭಕೋರಿದರು. ಪಂದ್ಯ ಮುಗಿದ ಬಳಿಕ ಕೂಡ ಕೊಹ್ಲಿ ಅವರು ಸೂರ್ಯ ಅವರ ಆಟವನ್ನು ಪ್ರಶಂಸಿಸಿ ಮತ್ತೊಮ್ಮೆ ತಬ್ಬಿಕೊಂಡರು. ಇದರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.ಸೂರ್ಯಕುಮಾರ್ ಯಾದವ್​ಗೆ ಶೇಕ್​ಹ್ಯಾಂಡ್ ನೀಡಿ ಭರ್ಜರಿ ಆಟವನ್ನು ಪ್ರಶಂಸಿಸಿದ ವಿರಾಟ್ ಕೊಹ್ಲಿ.ಪಂದ್ಯ ಮುಗಿದ ಬಳಿಕ ಮಾತನಾಡಿದ ಸೂರ್ಯಕುಮಾರ್ ಯಾದವ್, ಅಂಕಗಳ ದೃಷ್ಟಿಯಿಂದ ಈ ಪಂದ್ಯದಲ್ಲಿ ಗೆಲುವು ನಮಗೆ ತುಂಬಾ ಮುಖ್ಯವಾಗಿತ್ತು. ಹೋಮ್ ಗ್ರೌಂಡ್​ನಲ್ಲಿ ಜಯ ಸಾಧಿಸಿದ್ದು ಸಂಸತವಾಗಿದೆ. ನೀವು ಅಭ್ಯಾಸ ನಡೆಸಿದಷ್ಟು ಪಂದ್ಯದಲ್ಲಿ ಆಡಲು ಸುಲಭವಾಗುತ್ತದೆ ಎಂದು ಹೇಳಿದ್ದಾರೆ.ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಕೂಡ ಸೂರ್ಯಕುಮಾರ್ ಆಟವನ್ನು ಹಾಡಿಹೊಗಳಿದ್ದಾರೆ. ಸೂರ್ಯಕುಮಾರ್‌ ಅವರ ಬ್ಯಾಟಿಂಗ್ ಅದ್ಭುತವಾಗಿತ್ತು. ಅವರಿಂದ ಅತ್ಯುತ್ತಮ ಪ್ರದರ್ಶನ ಮೂಡಿಬಂದಿದೆ. ಅವರು ಸೆಟಲ್ ಆಗಿ ಸ್ಫೋಟಕ ಆಟಕ್ಕೆ ಮುಂದಾದರೆ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ಗ್ಲೆನ್ ಮ್ಯಾಕ್ಸ್​ವೆಲ್ ಅವರ 68 ಹಾಗೂ ಡುಪ್ಲೆಸಿಸ್ ಅವರ 65 ರನ್​ಗಳ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಪರ ಸೂರ್ಯಕುಮಾರ್(83), ನೆಹಾಲ್ ವಧೀರ(ಅಜೇಯ 52) ಬ್ಯಾಟ್ ಬೀಸಿ16.3 ಓವರ್​ನಲ್ಲೇ ಗೆಲುವು ಸಾಧಿಸಿತು.

source https://tv9kannada.com/photo-gallery/cricket-photos/virat-kohli-hugged-suryakumar-yadav-and-congratulated-on-his-knock-after-his-dismissal-mi-vs-rcb-kannada-news-vb-574492.html

Tags: samagrasuddi, ಸಮಗ್ರ ಸುದ್ದಿ

Post navigation

Faf Duplessis: ಸೋತ ಬಳಿಕ ತನ್ನದೇ ತಂಡದ ಆಟಗಾರನ ಬಗ್ಗೆ ಬೇಸರ ವ್ಯಕ್ತಪಡಿಸಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್
ಚಿತ್ರದುರ್ಗ ಜಿಲ್ಲೆಯಲ್ಲಿ ಈವರೆಗೂ ಹೊಸದುರ್ಗದಲ್ಲೇ ಹೆಚ್ಚು ಮತದಾನ : ಉಳಿದ ಕ್ಷೇತ್ರಗಳ ವಿವರ ಇಂತಿದೆ…!

Leave a Reply Cancel reply

Your email address will not be published. Required fields are marked *

Recent Comments

  1. Dayananda Patel T on 🛑 ಬುಧವಾರ ಭಾರತ್ ಬಂದ್ : 25 ಕೋಟಿಗೂ ಅಧಿಕ ಕಾರ್ಮಿಕರು ಸಜ್ಜು | ದೇಶವ್ಯಾಪಿ ಪ್ರತಿಭಟನೆಗೆ ಕರೆ 🛑July 8, 2025

    Date and day confused

  2. Kaveri Sonkamble on SBI ನೇಮಕಾತಿ; ಸರ್ಕಲ್​ ಬೇಸ್ಡ್​​ ಆಫೀಸರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನMay 31, 2025

    Kaveri Sonkamble

  3. Vani m on SBI Recruitment 2025: SBI ಬ್ಯಾಂಕಿನಲ್ಲಿ 2964 ಹುದ್ದೆಗಳಿಗೆ ನೇಮಕಾತಿ; ಪದವೀಧರರು ಕೂಡಲೇ ಅರ್ಜಿ ಸಲ್ಲಿಸಿMay 13, 2025

    I am complete b. Com in experience of work

  4. Sushma Basayya Hiremath on ಅಗ್ನಿವೀರ್​ ನೇಮಕಾತಿ: ರಾಜ್ಯದ 14 ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.April 9, 2025

    Sushma Basayya Hiremath

  5. samagrasuddi on ಮೈಸೂರು| ಶಾರದ ವಿಲಾಸ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಶ್ವ ಜಲ ದಿನ ಕಾರ್ಯಕ್ರಮ.March 24, 2025

    Tq

CITIES

Cities

“ಹಾಸನ ಜಿಲ್ಲೆಯಲ್ಲಿ ಹಠಾತ್ ಸಾವುಗಳ ಪತ್ತೆ: ಶೇ.75ಕ್ಕೂ ಹೆಚ್ಚು ಪ್ರಕರಣಗಳಿಗೆ ಹೃದಯ ಸಂಬಂಧಿ ಸಮಸ್ಯೆ ಕಾರಣ”

July 11, 2025
samagrasuddi

ಸಂಗ್ರಹ: ಸಮಗ್ರ ಸುದ್ದಿ ಜುಲೈ 11ಹಾಸನ ಜಿಲ್ಲೆಯಲ್ಲಿ ಇತ್ತೀಚೆಗೆ ನಿಸ್ಸಂಜ್ಞೆಯ ಹಠಾತ್ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಧ್ಯಯನ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯ ವರದಿಯು ಇದೀಗ ಬಹಿರಂಗವಾಗಿದ್ದು, ಆಧುನಿಕ ಜೀವನ ಶೈಲಿಯೇ ಹೃದಯಾಘಾತದ ಪ್ರಮುಖ ಕಾರಣವೆಂಬ ಅಂಶವನ್ನು…

Chitradurga Cities

🛣 ಬೆಂಗಳೂರು–ಚಿತ್ರದುರ್ಗ ನಡುವಿನ ಪ್ರಯಾಣದ ಅಂತರ ಇದೀಗ 110 ಕಿ.ಮೀ. ಬದಲಾಗಲಿದೆ.

July 8, 2025
samagrasuddi
Cities Health

🫀 ಸಾಲುಸಾಲು ಹೃದಯಾಘಾತದ ಸಾವು: ಸರ್ಕಾರದಿಂದ 8 ಮಹತ್ವದ ನಿರ್ಧಾರಗಳು.

July 8, 2025
samagrasuddi
Cities

🏫 ಕರ್ನಾಟಕದ 4,134 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿಗಳಿಗೆ ಅವಕಾಶ

July 4, 2025
samagrasuddi
Cities

ಕರ್ನಾಟಕದ ಪ್ರಮುಖ ಐತಿಹಾಸಿಕ ತಾಣಗಳು

July 4, 2025
samagrasuddi

You may Missed

Health

🧠 ಮೆದುಳಿಗೆ ಮಿತವಾದ ಆಹಾರ: MIND ಡೈಟ್‌ ನಿಂದ ಮೆಮೊರಿ ಮತ್ತು ಆರೋಗ್ಯಕ್ಕೆ ಬಲ!

July 12, 2025
samagrasuddi
Health

🩺 HEALTH | ಹೆಚ್ಚಾಗುತ್ತಿದೆ ಹೃದಯಾಘಾತ: ಕೆಟ್ಟ ಕೊಲೆಸ್ಟ್ರಾಲ್‌ ಹೋಗಿಸೋಕೆ ಈ ಆಹಾರ ಪದಾರ್ಥಗಳನ್ನು ಸೇವಿಸಿ!

July 11, 2025
samagrasuddi
Health

ಅಂಟೀತು ಶಿಲೀಂಧ್ರ (ಫಂಗಸ್) ರೋಗ! – ಜಾಗರೂಕರಾಗಿ

July 10, 2025
samagrasuddi
Cities Health

🫀 ಸಾಲುಸಾಲು ಹೃದಯಾಘಾತದ ಸಾವು: ಸರ್ಕಾರದಿಂದ 8 ಮಹತ್ವದ ನಿರ್ಧಾರಗಳು.

July 8, 2025
samagrasuddi
July 2025
M T W T F S S
 123456
78910111213
14151617181920
21222324252627
28293031  
« Jun    
  • IND vs ENG 2nd Test @ Lords: ಬೂಮ್ರಾ ಬಿರುಗಾಳಿಗೆ 5 ವಿಕೆಟ್, ರಾಹುಲ್ ಅರ್ಧಶತಕ
  • 🧠 ಮೆದುಳಿಗೆ ಮಿತವಾದ ಆಹಾರ: MIND ಡೈಟ್‌ ನಿಂದ ಮೆಮೊರಿ ಮತ್ತು ಆರೋಗ್ಯಕ್ಕೆ ಬಲ!
  • 🌟 Horoscope Today – 12 July 2025 ಇಂದು ಈ ರಾಶಿಯವರು ದೊಡ್ಡ ಗೌರವಕ್ಕೆ ಅರ್ಹರಾಗುವರು!
  • ಚಿತ್ರದುರ್ಗ ಜಿಲ್ಲೆಗೆ ಹೊಸ ಅಧಿಕಾರೇತರ ಸದಸ್ಯರ ನಾಮನಿರ್ದೇಶನ: ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮಕ್ಕೆ ನೂತನ ಸ್ಥಾಪನೆ
  • 🎓 ಗುರುಪೂರ್ಣಿಮಾ ಅಂಗವಾಗಿ ಅಕ್ಷರಾಭ್ಯಾಸ: ಭೋವಿ ಗುರುಪೀಠದ ಶ್ರೀಗಳಿಂದ ಬಾಲಪ್ರತಿಭೆಗಳಿಗೆ ಮಾರ್ಗದರ್ಶನ
Copyright © 2025 ಸಮಗ್ರ ಸುದ್ದಿ
Contact us
Theme by: Theme Horse
Proudly Powered by: WordPress