ಮಳೆಯಿಂದ ಮ್ಯಾಚ್ ಹಾಳು: ಟೀಂ ಇಂಡಿಯಾದ ಅದ್ಭುತ ಆರಂಭ ವ್ಯರ್ಥ!

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯವನ್ನು ಮಳೆಯಿಂದಾಗಿ ರದ್ದುಗೊಳಿಸಲಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ, 9.4 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿ ಆಡುತ್ತಿದ್ದಾಗ, ಪಂದ್ಯವನ್ನು ಮಳೆಯಿಂದಾಗಿ ಎರಡನೇ ಬಾರಿಗೆ ನಿಲ್ಲಿಸಲಾಯಿತು.

ಭಾರತದ ಇನ್ನಿಂಗ್ಸ್ ನಡುವೆ ಮೊದಲ ಬಾರಿಗೆ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯವನ್ನು ತಲಾ 18 ಓವರ್‌ಗಳಿಗೆ ಇಳಿಸಲಾಯಿತು. ಆದಾಗ್ಯೂ, ಮಳೆ ಮತ್ತೆ ಆಟಕ್ಕೆ ಅಡ್ಡಿಪಡಿಸಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು.


ಈ ಇನ್ನಿಂಗ್ಸ್‌ನಲ್ಲಿ ಶುಭ್​ಮನ್ ಗಿಲ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಗಿಲ್ 20 ಎಸೆತಗಳಲ್ಲಿ 37 ರನ್ ಮತ್ತು ಸೂರ್ಯ 24 ಎಸೆತಗಳಲ್ಲಿ 39 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರಿಗಿಂತ ಮೊದಲು ಅಭಿಷೇಕ್ ಶರ್ಮಾ ಕೂಡ 14 ಎಸೆತಗಳಲ್ಲಿ 19 ರನ್​ಗಳ ಕಾಣಿಕೆ ನೀಡಿದ್ದರು.

Views: 38

Leave a Reply

Your email address will not be published. Required fields are marked *