ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ. 22 : ನಗರದ, ನಗರ ದೇವರಾಗಿ ಮೇಲುದುರ್ಗದಲ್ಲಿ ನೆಲೆಸಿರುವ ಶ್ರೀ ಸಂಪಿಗೆ ಸಿದ್ದೇಶ್ವರ ಸ್ವಾಮಿ ಹಾಗೂ ಶ್ರೀ ವೀರಭದ್ರಸ್ವಾಮಿಯ ಗುಗ್ಗುಳ ಮತ್ತು ಕೆಂಡಾರ್ಚನೆಯನ್ನು ಇಂದು ಅದ್ದೂರಿಯಾಗಿ ನಡೆಸಲಾಯಿತು.
ಗುಗ್ಗುಳ ಮತ್ತು ಕೆಂಡಾರ್ಚನೆಯನ್ನು ಪ್ರತಿ ಮೂರು ವರ್ಷಗಳಿಗೊಂದು ಸಾರಿ ನೆರವೇರಿಸುತ್ತಿದ್ದು ಏ. 21ನೇ ಸೋಮವಾರ ರಾತ್ರಿ 8.
ಗಂಟೆಯಿಂದ, ಗಂಗಾಪೂಜೆ, ಕಾಳಿಕಾದೇವಿ ಸ್ಥಾಪನೆ, ಕಂಕಣಧಾರಣೆ, ರುದ್ರಾಭಿಷೇಕ, ಬಿಲ್ವಾರ್ಚನೆ, ಶ್ರೀ ಅಮ್ಮನವರಿಗೆ
ಕುಂಕುಮಾರ್ಚನೆ ರುದ್ರಹೋಮ ಇತ್ಯಾದಿ ಕಾರ್ಯಕ್ರಮಗಳು ನಡೆದಿದ್ದು, ಏ. 22ನೇ ಮಂಗಳವಾರ ಬೆಳಗಿನ ಜಾವ ಮಹಾ
ಮಂಗಳಾರತಿ ನಂತರ ಶ್ರೀ ಸಂಪಿಗೆ ಸಿದ್ದೇಶ್ವರ ದೇವಾಲಯದ ಮುಂಭಾಗದಲ್ಲಿ “ಕೆಂಡಾರ್ಚನೆ” ನಂತರ “ಅಡ್ಡಪಲ್ಲಕ್ಕಿ ಉತ್ಸವ”
ನೆರವೇರಿಸಲಾಯಿತು.
ಗುಗ್ಗಳ ಸಾಗುವ ದಾರಿಯಲ್ಲಿ ಶ್ರೀ ವೀರಭದ್ರ ಸ್ವಾಮಿಯ ಭಕ್ತಾಧಿಗಳು ತಮ್ಮ ಮನೆಯ ಮುಂದೆ ಗುಗ್ಗಳ ಆಗಮಿಸಿದಾಗ ನೀರು
ರಂಗೋಲಿಯನ್ನು ಹಾಕಿ ಗುಗ್ಗಳವನ್ನು ಸ್ವಾಗತಿಸಿ ಸ್ವಾಮಿಗೆ ತೆಂಗಿನಕಾಯಿ, ಹೂವು, ಬಾಳೆ ಹಣ್ಣನ್ನು ನೀಡಿ ಪೂಜೆಯನ್ನು ಸಲ್ಲಿಸಿ
ತಮ್ಮ ಶಕ್ತಾನುಸಾರ ಭಕ್ತಿಯ ಕಾಣಿಕೆಯನ್ನು ಸಲ್ಲಿಸಿದರು.
ಕೆಂಡಾರ್ಚನೆ ನಂತರ ಶ್ರೀ ಸಂಪಿಗೆ ಸಿದ್ದೇಶ್ವರಸ್ವಾಮಿ ಹಾಗೂ ಶ್ರೀ ವೀರಭದ್ರಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವವು ಗುಗ್ಗುಳ
ಕೊಡಗಳ ಸಹಿತ ರಾಣೇಬೆನ್ನೂರಿನ ಬಸವಣ್ಣಪ್ಪ ಹಾಗೂ ವೃಂದದವರಿಂದ ಶ್ರೀ ವೀರಭದ್ರ ಸ್ವಾಮಿಯವರ ವಚನಾಮೃತಗಳೊಂದಿಗೆ
ಪುರುವಂತರು ಹಾಗೂ ಚಮ್ಮೇಳನದವರು, ಶ್ರೀ ಬ್ರಹ್ಮಲಿಂಗೇಶ್ವರ ಸಮಾಳ ಸಂಘ, ಹಾರಕನಾಳು ಮತ್ತು ನಾಣ್ಯಪುರ ಇವರ
ಮುಂದಾಳತ್ವದಲ್ಲಿ ನಂದಿ ಧ್ವಜ ಕುಣಿತದೊಂದಿಗೆ ಮೇಲುದುರ್ಗದಿಂದ ಕೆಳಗಿಳಿದು ಶ್ರೀ ಗಾರೇಬಾಗಿಲು ಈಶ್ವರ ದೇವಾಲಯದ
ಮುಂಭಾಗದಿಂದ ರಾಜ ಉತ್ಸವಾಂಬ ದೇವಾಲಯ, ದೊಡ್ಡಪೇಟೆ, ರಂಗಯ್ಯನಬಾಗಿಲು, ಬಸವಮಂಟಪ ರಸ್ತೆ, ಧರ್ಮಶಾಲಾ
ರಸ್ತೆಯಲ್ಲಿರುವ ಅರಳಿಮರ ಮುಂಭಾಗದಿಂದ ಮೈಸೂರು ಬ್ಯಾಂಕ್ ವೃತ್ತ, ಪೂನಾ ಬೆಂಗಳೂರು ರಸ್ತೆ, ಸಂತೇಪೇಟೆಯಲ್ಲಿರುವ
ಗಾಂಧಿವೃತ್ತ ಶ್ರೀ ನೀಲಕಂಠೇಶ್ವರ ದೇವಸ್ಥಾನ ಹಳೇ ಇಂಡಿಯನ್ ಬ್ಯಾಂಕ್ ಪಕ್ಕದಿಂದ ಆನೇಬಾಗಿಲು, ಚಿಕ್ಕಪೇಟೆ ಮೂಲಕ
ಮೇಲುದುರ್ಗದಲ್ಲಿರುವ ದೇವಸ್ಥಾನ ಸೇರಿತು.
ಮಂಗಳವಾರ ಬೆಳಿಗ್ಗೆ ಸಾರ್ವಜನಿಕವಾಗಿ “ಅನ್ನಸಂತರ್ಪಣೆ”ಯನ್ನು ಏರ್ಪಡಿಸಲಾಗಿದ್ದು, ಸಕಲ ಭಕ್ತಾದಿಗಳು ಈ ಕಾರ್ಯಕ್ರಮಕ್ಕೆ
ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾದರು. ಈ ಎಲ್ಲಾ ಕಾರ್ಯಕ್ರಮವನ್ನು ಶ್ರೀ ಸಂಪಿಗೆ
ಸಿದ್ದೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಪಿ.ಎನ್.ಸಿದ್ದರಾಜು ನೇತೃತ್ವದಲ್ಲಿ ನಡೆಸಲಾಯಿತು.
Views: 0