
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಏ. 25 : ಪಹಲ್ಗಾಮ್ನಲ್ಲಿ ಹಿಂದೂಗಳ ಮೇಲೆ ಉಗ್ರರ ಅಟ್ಟಹಾಸ ಪ್ರಕರಣವನ್ನು ಉಗ್ರವಾಗಿ ಖಂಡಿಸಿದ್ದು, ಇದರ ಬಗ್ಗೆ ರಾಷ್ಟ್ರಾದ್ಯಂತ ಸರ್ವ ಪಕ್ಷಗಳು ಸೇರಿ ಪಕ್ಷಾತೀತವಾಗಿ ಸರ್ಕಾರಕ್ಕೆ ಬೆಂಬಲ ನೀಡಿದ್ದು, ಕೇಂದ್ರ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳಿ ಅದಕ್ಕೆ ನಮ್ಮ ಬೆಂಬಲ ಎಂದು ಯೋಜನೆ& ಸಾಂಖ್ಯಿಕ ಸಚಿವ ಡಿ.ಸುಧಾಕರ್ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಕೃತ್ಯ ಎಸಗಿದ್ದಾರೆ ಅವರನ್ನು ಸೆದೆ ಬಡಿಯುವ ಕೆಲಸ ಸರ್ಕಾರ ಮಾಡಬೇಕು ಪ್ರಧಾನಿ ಮೋದಿ ಅವರ ಜೊತೆ ನಮ್ಮ ಸರ್ಕಾರ ಜೊತೆಗಿರಲಿದೆ ಇದರ ಬಗ್ಗೆ ಸಿಎಂ, ಡಿಸಿಎಂ ಕೂಡ ಈಗಾಗಲೇ ಹೇಳಿದ್ದಾರೆ ಈ ರೀತಿಯ ಘಟನೆ ಆಗಲೇಬಾರದು ಕೋಮುವಾದ ಬಿತ್ತುವಂತಹ ಘಟನೆ ಆಗಬಾರದು ಇಲ್ಲಿ ರಾಜಕೀಯ ಮಾಡುವುದು ಅನವಶ್ಯಕ ಎಂದು ಸಿಎಂ, ಡಿಸಿಎಂ ಹೇಳಿದ್ದಾರೆ ಯಾರೂ ಕೂಡ ಇದ್ರಲ್ಲಿ ರಾಜಕೀಯ ಬೆರೆಸುವ ಕೆಲಸ
ಮಾಡಬಾರದು ಎಂದರು ತಿಳಿಸಿದರು.
ರಾಷ್ಟ್ರದ ಏಕತೆ, ಸಮಗ್ರತೆಗೆ ಎಲ್ಲರೂ ಬದ್ದರಾಗಿ ಇರಬೇಕು ರಾಬರ್ಟ್ ವಾದ್ರಾ ಹೇಳಿಕೆ ವಿಚಾರಕ್ಕೆ ನಾನು ರಿಯಾಕ್ಟ್ ಮಾಡಲ್ಲ
ಎಂದ ಸಚಿವರು, ದೇಶ ಶಾಂತಿಯಿಂದ ಅಹಿಂಸಾ ಮಾರ್ಗದಲ್ಲಿ ಹೋಗಬೇಕು ರಾಜತಾಂತ್ರಿಕವಾಗಿ ಪ್ರಧಾನಿಗಳು ಈಗಾಗಲೇ ದಿಟ್ಟ ನಿಲುವನ್ನು ತೆಗೆದುಕೊಂಡಿದ್ದಾರೆ ಯಾವುದೇ ಕಾರಣಕ್ಕೂ ಉಗ್ರವಾದವನ್ನು ಸಹಿಸಲ್ಲ ಎಂದು ಭಾರತ ದೇಶ ರವಾನಿಸಿದೆ ಇದಕ್ಕೆ ನಮ್ಮ ಸರ್ಕಾರದ ಹಾದಿಯಾಗಿ ನಾವೆಲ್ಲರೂ ಬದ್ದರಿದ್ದೀವಿ- ಸಚಿವ ಸುಧಾಕರ್ ತಿಳಿಸಿದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0