ಶ್ರೀರಾಘವೇಂದ್ರಸ್ವಾಮಿಗಳವರ ಮಠದವತಿಯಿಂದ ಆಶ್ಲೇಷ ಬಲಿ ಹೋಮ ಹಾಗೂ ‘ದುರ್ಗಾದೀಪ ನಮಸ್ಕಾರ ಜೂ. 1 ರಂದು ಹಮ್ಮಿಕೊಳ್ಳಲಾಗಿದೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮೇ. 27 ನಗರದ ಚಿಕ್ಕಪೇಟೆಯ ಆನೆಬಾಗಿಲು ಹತ್ತಿರದ ಶ್ರೀ ಗುರುರಾಜೋ ವಿಜಯತೇ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳವರ ಮಠದವತಿಯಿಂದ ಆಶ್ಲೇಷ ಬಲಿ ಹೋಮ ಹಾಗೂ ‘ದುರ್ಗಾದೀಪ ನಮಸ್ಕಾರ ಜೂ. 1 ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಜೂ. 01ನೇ ಭಾನುವಾರ ಬೆಳಿಗ್ಗೆ 9-30ಕ್ಕೆ ಅಶ್ಲೇಷ ಬಲಿಯ ಹೋಮ ನಡೆಯಲಿದ್ದು, ಇದರಿಂದ ಶ್ರೀ ಮಾತಾಪಿತೃಗಳ ನಿಂದನೆ,
ಮಾನಸಿಕ ತೊಳಲಾಟ, ಕ್ಷಯರೋಗ, ಕುಷ್ಠರೋಗ, ತುರಿಕೆರೋಗ, ಚರ್ಮರೋಗ, ಸಮಸ್ತ ಅಂಗವಿಕಲತೆ, ಕಿವಿ ಸೋರುವುದು,
ಸರ್ಪ ಹಿಂಸೆ, ಸರ್ಪವಧ, ಅಪಘಾತದಿಂದ ಆಗಿರುವ ಮತ್ತು ತಿಳಿದು ತಿಳಿಯದೇ ಮಾಡಿದ ಸರ್ಪಹತ್ಯೆ, ಗುರುಶಾಪ, ಗುರುವಿನಿಂದ
ಪೂರ್ವಜನ್ಮದ ಹಾಗೂ ಈ ಜನ್ಮದಲ್ಲಿ ಆಗಿರುವ ಇನ್ನೂ ಹಲವಾರು ದೋಷಗಳು ಕಳೆದು ಮತ್ತು ನಾರಾಯಣ ಬಲಿಯ ದೋಷ
ನಿವಾರಣೆಯಾಗುವುದು ಭಕ್ತಾಧಿಗಳು ಸೇವೆಯಲ್ಲಿ ಪಾಲ್ಗೊಂಡು ಶ್ರೀ ಗುರುರಾಜ ಅಂತರ್ಗತ ಶ್ರೀ ಆಶ್ಲೇಷ ಬಲಿರಾಜ
ಅಭಿಮಾನಿಯಾದ ಶೇಷದೇವರ ಅಂತರ್ಗತನಾದ ಶ್ರೀಜಯಾಪತಿ ಸಂಕರ್ಷಣಾಭಿನ್ನ ಶ್ರೀ ಲಕ್ಷ್ಮೀನರಸಿಂಹ ದೇವರ ಸಂಪೂರ್ಣ
ಅನುಗ್ರಹ ಫಲ ಪ್ರಾಪ್ತಿಯಾಗುವುದು.

ಜೂ. 01 ನೇ ಭಾನುವಾರ ಸಂಜೆ 6-00ಕ್ಕೆ ‘ದುರ್ಗಾದೀಪ ನಮಸ್ಕಾರ ಕಾರ್ಯಕ್ರಮ ನಡೆಯಲಿದ್ದು, ಇದನ್ನು ಮಾಡುವುದರಿಂದ
ವಿವಾಹ ವಿಳಂಬದೋಷ, ವಿದ್ಯಾ, ಆತ್ಮಸ್ಥೆರ್ಯ, ರಾಜವಶ, ಯಶ, ಶತೃಭಾಧೆ ನಿವೃತ್ತಿ, ಸಕಲದೋಷ ಪರಿಹಾರ, ದೃಷ್ಟಿದೋಷ
ಪರಿಹಾರ, ಲಕ್ಷ್ಮೀಪ್ರಾಪ್ತಿ, ನವಗ್ರಹ ದೋಷ ಪರಿಹಾರ, ಪ್ರಯೋಗ ಅಭಿಚಾರ ದೋಷ ನಿವಾರಣೆಯಾಗುವುದು. ಕಾರಣ ಭಕ್ತಾದಿಗಳು ಸೇವೆಯಲ್ಲಿ ಪಾಲ್ಗೊಂಡು ಶ್ರೀ ಗುರುರಾಜರ ಅಂತರ್ಗತ ಮಹಾಲಕ್ಷ್ಮೀ, ಮಹಾಕಾಳಿ, ಮಹಾಸರಸ್ವತಿ ದೇವಿಯರ ಹಾಗೂ ಲಕ್ಷ್ಮೀನರಸಿಂಹದೇವರ ಸಂಪೂರ್ಣ ಅನುಗ್ರಹ ಫಲ ಪ್ರಾಪ್ತಿಯಾಗುವುದು ಎಂದು ತಿಳಿಸಿದೆ.

ಆಶ್ಲೇಷ ಬಲಿ ಸಾಮೂಹಿಕ ಹೋಮ ಹಾಗೂ ದುರ್ಗಾದೀಪ ನಮಸ್ಕಾರ ಸಾಮೂಹಿಕ ಸೇವಾ ದರ ತಲಾ -200 ರೂ.ಗಳನ್ನು ನಿಗಧಿ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ಶಾಖಾ ವ್ಯವಸ್ಥಾಪಕರ ದೂರವಾಣಿ ಸಂಖ್ಯೆ 08194-224141 : 9483833601 ಸಂಪರ್ಕ ಮಾಡಬಹುದಾಗಿದೆ.

Leave a Reply

Your email address will not be published. Required fields are marked *