Horoscope Today June 6: ಈ ರಾಶಿಯವರು ಕೋಪ ಕಡಿಮೆ ಮಾಡಿಕೊಳ್ಳದಿದ್ದರೆ ಉದ್ಯೋಗ ಕೈ ತಪ್ಪಲಿದೆ.

ನಿತ್ಯಪಂಚಾಗ, ಜೂನ್​ 6: ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಸೌರ ಮಾಸ : ವೃಷಭ, ಮಹಾನಕ್ಷತ್ರ : ರೋಹಿಣೀ, ಮಾಸ : ಜ್ಯೇಷ್ಠ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಚಿತ್ರಾ, ಯೋಗ : ಧ್ರುವ, ಕರಣ : ತೈತಿಲ, ಸೂರ್ಯೋದಯ – 06 – 03 am, ಸೂರ್ಯಾಸ್ತ – 06 – 58 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:55 – 12:31, ಯಮಘಂಡ ಕಾಲ 15:45 – 17:22, ಗುಳಿಕ ಕಾಲ 07:41 – 09:18

ಮೇಷ ರಾಶಿ :

ಸಮಯಕ್ಕೆ ಸರಿಯಾಗಿ ಮಾಡಬೇಕಾದುದನ್ನು ಮಾಡಿ, ನಿಮಗೆ ಸಮಯ ಉಳಿಯುವುದು. ಆತ್ಮವಿಶ್ವಾಸದಿಂದ ಕೆಲಸ ಶುರುಮಾಡಿ. ಮನೆಯವರ ಜವಾಬ್ದಾರಿಯು ಹೆಚ್ಚಿನ ಒತ್ತಡ ತರುವ ಸಾಧ್ಯತೆ ಇದೆ. ಪ್ರೀತಿಯ ಅಭಿವ್ಯಕ್ತಿಯು ಸಂಬಂಧಗಳಲ್ಲಿ ಸ್ಪಷ್ಟತೆಯನ್ನು ತಂದೀತು. ಮನಸ್ಸಿನಲ್ಲಿ ದೈವಭಕ್ತಿ ಮೂಡಬಹುದು. ವಿಶೇಷ ಭೋಜನವು ನಿಮ್ಮ ಆರೋಗ್ಯಕ್ಕೆ ತೊಂದರೆಕೊಡುವುದು. ಮನೆಗೆ ಬರುವ ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿ. ಹಣಕಾಸಿನ ಅನುಕೂಲತೆಯಿಂದ ನೆಮ್ಮದಿ ಗಳಿಸುವಿರಿ. ಉದ್ಯೋಗ ಸ್ಥಳದಲ್ಲಿ ನಿರಾಸೆಯ ಪ್ರತಿಕ್ರಿಯೆ ಕಂಡುಬರುತ್ತದೆ. ಪಾಲುದಾರಿಕೆ ವ್ಯಾಪಾರದಲ್ಲಿ ಎಚ್ಚರಿಕೆ ಇರಬೇಕು. ಸ್ವಭಾವವು ಬಹಳ ತೀವ್ರವಾಗಿ ಇರಲಿದೆ. ಯಾರ ಮಾತನ್ನೂ ಕೇಳವ ಸಹನೆ ಇರದು.‌ ಮನೆಯ ಕಾರ್ಯದಲ್ಲಿ ಸ್ನೇಹಿತರ ಭಾಗವಹಿಸುವಿಕೆ ಇರುವುದು. ಪ್ರತಿಸ್ಪರ್ಧಿಗಳಿಗೆ ಸರಿಯಾದ ಸ್ಪರ್ಧೆಯನ್ನು ಕೊಡುವಿರಿ. ನಿಮ್ಮ ನಿರ್ಧಾರಗಳೇ ಅಂತಿಮವಾಗಬೇಕು ಎನ್ನುವ ಮನಃಸ್ಥಿತಿ ಇರುವುದು. ಮಾನಸಿಕವಾಗಿ ಉತ್ಸಾಹವು ಕಡಿಮೆ ಇರುವುದು.

ವೃಷಭ ರಾಶಿ :

ವಿದೇಶ ವ್ಯವಹಾರದಲ್ಲಿ ನಂಬಿಕೆ ಇರದು. ಅದೃಷ್ಟವನ್ನು ಹುಡುಕುತ್ತಿದ್ದರೆ ಅದಕ್ಕೆ ನಿಮ್ಮ ಅನುವರ್ತಿತ್ವವೂ ಇರಲಿ. ಅತಿಯಾದ ಪ್ರಯಾಣದಿಂದ ಆಯಾಸ ಮತ್ತು ಒತ್ತಡಗಳು ನಿರ್ಮಾಣವಾಗುವುದು. ಕಛೇರಿಯಲ್ಲಿ ನಿಮ್ಮ ಕೆಲಸಗಳನ್ನು ಕಂಡು ನಿಮ್ಮನ್ನು ಪ್ರಶಂಸಿಸುವರು‌. ಮನಸ್ಸಿನಿಂದ ಬಂದ ಮಾತುಗಳು ಸಂಬಂಧವನ್ನು ಬಲಪಡಿಸುತ್ತವೆ. ಹೊಸದಾಗಿ ಉಂಟಾದ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ವೈಯಕ್ತಿಕ ಚಿಂತನೆಗಳಿಗೆ ಅವಕಾಶ ಕೊಡಿ. ಮನಸ್ಸಿನಲ್ಲಿ ನೆಲೆಸಿರುವ ಗೊಂದಲಗಳು ಸಮಾಧಾನವಾಗಬಹುದು. ಕಾನೂನಿನ ಹೋರಾಟದಲ್ಲಿ ಜಯ ಗಳಿಸುವಿರಿ. ಪ್ರತಿಯೊಂದು ಕ್ಷಣದಲ್ಲೂ ನಿಮ್ಮ ಸಂಗಾತಿಯ ಸಹಕಾರ ದೊರೆಯುತ್ತದೆ. ಆಲಸ್ಯದಿಂದ ಎದ್ದಾಗ ಮಾತ್ರ ನೀವು ನಿಮ್ಮ ಅನೇಕ ಕಾರ್ಯಗಳನ್ನು ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಕುಟುಂಬ ಸದಸ್ಯರ ಅಗತ್ಯತೆಗಳ ಬಗ್ಗೆ ನೀವು ಗಮನ ಹರಿಸಬೇಕು. ನಿಮ್ಮ ಪ್ರತಿಭೆಗೆ ಯೋಗ್ಯವಾದ ಕಾರ್ಯವು ಸಿಗುವುದು. ಭೂಮಿಯ ವ್ಯವಹಾರವನ್ನು ಒಬ್ಬೊಂಟಿಯಾಗಿ ನಿರ್ವಹಿಸುವಿರಿ.

ಮಿಥುನ ರಾಶಿ :

ನೀವು ಶಾಂತರಾಗಿ ಮಾಡಬೇಕಾದುದನ್ನು ನೋಡಿಕೊಳ್ಳಿ. ಇಂದು ನೀವು ನಿಚ್ಚಲ ಮನಸ್ಸಿನಿಂದ ವಿಚಲಿತರಾಗುವುದು ಬೇಡ. ವಾಸ್ತವಕ್ಕೆ ಹತ್ತಿರದ ಕಲ್ಪನೆಯು ಇರಲಿ. ಶೈಕ್ಷಣಿಕವಾದ ಪ್ರಗತಿಯನ್ನು ಸಾಧಿಸಬೇಕಾಗಬಹಿದು. ಪ್ರೀತಿಯಲ್ಲಿ ನಂಬಿಕೆ ಕಡಿಮೆಯಾಗಲಿದೆ. ಕೆಲಸದಲ್ಲಿ ನಿರ್ಧಾರ ತೆಗೆದುಕೊಳ್ಳುವ ವೇಳೆ ದಿಟ್ಟತನ ಇರಲಿ. ನಿಮ್ಮ ಆದರ್ಶಗಳು ಇತರರಿಗೆ ಪ್ರೇರಣೆಯಾಗಲಿದೆ. ಧೈರ್ಯವು ಯಶಸ್ಸಿಗೆ ದಾರಿ ತೋರುತ್ತದೆ. ಕೆಲವರು ನಿಮ್ಮ ಸಹಾಯವನ್ನು ಅಪೇಕ್ಷಿಸುತ್ತಿದ್ದಾರೆ. ಸಂಗಾತಿಯ ಅವಶ್ಯಕತೆಗಳನ್ನು ಖುಷಿಯಿಂದ ಪೂರೈಸುವಿರಿ. ಮಕ್ಕಳ ಮೇಲಿನ ಪ್ರೀತಿಯಿಂದ ಮನದ ನೋವನ್ನು ಮರೆಯುವಿರಿ. ಯಾವುದನ್ನೂ ಗೊಂದಲ ಮಾಡಿಕೊಳ್ಳದೇ ತೀರ್ಮಾನಕ್ಕೆ ಬರುವುದು ಉಚಿತ. ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ಶಾಶ್ವತ ಪರಿಹಾರದಿಂದ ಮರೆಯರಾಗುತ್ತದೆ. ಸಕಾರಾತ್ಮಕ ವಿಷಯಗಳು ವೇಗವನ್ನು ಪಡೆಯುತ್ತವೆ.‌ ಮಕ್ಕಳಿಗಾಗಿ ನೀವು ಹೊಸ ವಾಹನವನ್ನು ಖರೀದಿಸಬಹುದು.

ಕರ್ಕಾಟಕ ರಾಶಿ :

ಆತ್ಮವಿಮರ್ಶೆಗೆ ಸಕಾಲವಾಗಲಿದೆ. ನಿಮ್ಮೊಳಗಿದ್ದ ಮೋಡಗಟ್ಟಿದ ವಾತಾವರಣ, ಕರಗಿ, ನೀರಾಗಿ ಪ್ರವಾಹವೂ ಆಗಬಹುದು. ಮಕ್ಕಳಿಂದ ಮಾನಸಿಕ ಹಿಂಸೆ ಎದುರಾದೀತು. ನಿಮ್ಮ ಹಳೆಯ ಹಣವು ಕೈಸೇರಬಹುದು. ಖರ್ಚು ಹೆಚ್ಚಾಯಿತು ಎನ್ನುವ ಭಯವಿರುವುದು. ಗೊಂದಲದಿಂದ ದೂರವಿರುವ ಪ್ರಯತ್ನ ಮಾಡಿ. ಮನಸ್ಸಿಗೆ ಶಾಂತಿ ತರಲು ಸಂಗೀತ ಅಥವಾ ಸಾಹಿತ್ಯ ಸಹಕಾರಿ. ನಿಮ್ಮ ಭಾವನೆಗಳನ್ನು ಸ್ಪಷ್ಟವಾಗಿ ಹಂಚಿಕೊಳ್ಳಿ. ಮಕ್ಕಳೊಂದಿಗೆ ಸಮಯ ಕಳೆಯಿರಿ. ಕುಟುಂಬದ ಒಗ್ಗಟ್ಟಿಗೆ ಧಕ್ಕೆ ಉಂಟಾಗುವ ಘಟನೆಯೊಂದು ನಡೆಯಲಿದೆ. ಮುಂಗೋಪದಿಂದ ವರ್ತಿಸುವ ಕಾರಣ ಉದ್ಯೋಗಾವಕಾಶವೊಂದು ಕೈಜಾರಲಿದೆ. ಶುದ್ಧ ಮನಸ್ಸಿನಂತೆ ತೋರಿದರೂ ಅಂತರಂಗದಲ್ಲಿ ಕಲ್ಮಶವು ಹೆಚ್ಚಿರುವುದು. ವಿವಾಹದ ಮಾತುಕತೆಗಳನ್ನು ನಡೆಸಲು ದೂರದ ಊರಿಗೆ ಪ್ರಯಾಣ ಮಾಡುವಿರಿ. ಜಾಣ್ಮೆಯಿಂದ ನಿಮ್ಮ ಕೆಲಸವನ್ನು ಬೇಗ ಪೂರ್ಣ‌ಮಾಡುವಿರಿ. ವಿವಾದಕ್ಕಾಗಿಯೇ ಮಾತನಾಡುವುದು ಬೇಡ.

ಸಿಂಹ ರಾಶಿ :

ನಿಮ್ಮ ವ್ಯಾವಹಾರಿಕ ವ್ಯಕ್ತಿತ್ವಕ್ಕೆ ಕುಂದುಮಾಡುವರು. ಇಂದು ಇನ್ನೊಬ್ಬರ ಸುಖವನ್ನು ಕಸಿದುಕೊಂಡು ಯಾವ ಸುಖವನ್ನು ಪಡೆಯಬಹುದು? ನಿಮ್ಮ ಬಗೆಗಿನ ಸದ್ಭಾವಗಳು ಬದಲಾದಾವು. ಸಣ್ಣ ಪುಟ್ಟ ವಿಷಗಳಿಗೂ ಕೋಪಗೊಳ್ಳುವಿರಿ. ಪರರ ಬಿಕ್ಕಟ್ಟಿಗೆ ನೀವು ಪರಿಹಾರವಾಗಬಹುದು. ನಿಮಗೆ ಕಷ್ಟವಾದರೆ ಯಾರಿಲ್ಲ. ನಿಮ್ಮ ಪರಿಶ್ರಮ ಇಂದು ಗಮನ ಸೆಳೆಯಲಿದೆ. ಆತ್ಮಪರಿಶೀಲನೆಗೆ ಈ ದಿನ ಅನುಕೂಲ. ಸಂಬಂಧಗಳನ್ನು ಹೂಡಿಕೆ ಎಂದು ಪರಿಗಣಿಸಿ, ನೆನೆಪಾದ ಹಳೆಯ ಸ್ನೇಹಿತರಿಂದ ಸಹಾಯ ಬರಬಹುದು. ಆತ್ಮೀಯರೊಬ್ಬರ ಜೊತೆ ವಿವಾದ ಉಂಟಾಗಬಹುದು. ನಿಮ್ಮ ಕಾರ್ಯಕ್ಷೇತ್ರದಲ್ಲಿ ಅತಿಯಾದ ಕಾರ್ಯದಿಂದ ನಿಮಗೆ ತೊಂದರೆಯಾದೀತು. ನಿಮ್ಮ ದೊಡ್ಡಸ್ತಿಕೆಯನ್ನು ಬಿಟ್ಟು ವ್ಯವಹರಿಸಿ. ಮನೆಯಲ್ಲಿಯೇ ವಾಸಿಸುವವರು ಸಣ್ಣ ಆದಾಯದ ಬಗ್ಗೆ ಆಲೋಚಿಸುವರು. ಯಾರಾದರೂ ಮುಖಸ್ತುತಿಯನ್ನು ಮಾಡಬಹುದು. ಮುಜುಗರವೂ ನಿಮಗೆ ಆದೀತು. ಅತಿಯಾದ ನಂಬಿಕೆಯು ನಿಮ್ಮ ಮೌಲ್ಯಯುತ ವಸ್ತುಗಳನ್ನು ಕಳೆದುಕೊಳ್ಳುವಂತೆ ಮಾಡುವುದು.

ಕನ್ಯಾ ರಾಶಿ :

ವಿಶ್ವಾಸಕ್ಕೆ ಯೋಗ್ಯರಾದವರ ಸಹವಾಸ ಸಿಗಲಿದೆ. ಇಂದು ಮನೆಯ ಸಣ್ಣ ಖರ್ಚುಗಳೂ ದೊಡ್ಡದಾದ ಮೊತ್ತವನ್ನು ಕಳೆಯುವುದು. ಎಲ್ಲ ಕಾರ್ಯದಿಂದ ಹಣ ಬರುತ್ತದೆ ಎಂದೇನಿಲ್ಲ. ನಿಮ್ಮ ಜೀವನವನ್ನು ನೀವೇ ಲಘುವಾಗಿ ಕಾಣುವುದು ಬೇಡ. ಬಲಾಢ್ಯರ ಜೊತೆ ವೈರ ಕಾಣಿಸಿಕೊಳ್ಳುವುದು. ನಿಮ್ಮ ಮಾನಸಿಕ ಸ್ಥಿತಿ ಬಲಾಢ್ಯವಾಗಿರಲಿ. ಸ್ನೇಹಿತರ ಸಲಹೆಗಳಿಂದ ಹೊಸ ಆಯ್ಕೆಗಳನ್ನು ಪರಿಶೀಲಿಸಬಹುದು. ಪ್ರೀತಿಯ ಸಂಬಂಧದಲ್ಲಿ ನಂಬಿಕೆ ತುಂಬಬೇಕು. ನಿರ್ಧಾರಗಳ ಕುರಿತು ಧೈರ್ಯವಿಟ್ಟು ನಿಲ್ಲಿ. ನಿಮ್ಮ ಆಂತರಿಕ ಶಕ್ತಿಯ ಮೇಲೆ ನಂಬಿಕೆ ಇಡಿ. ವ್ಯವಹಾರದಲ್ಲಿ ಲಾಭದ ಸೂಚನೆಗಳಿವೆ. ಹಣಕಾಸಿನ ವ್ಯವಹಾರದಲ್ಲಿ ಅಸಹಜ ನಿಲುವು ತಾಳುವಿರಿ. ನಿಮ್ಮ ನಡೆಯು ಎಲ್ಲರಿಗೂ ಒಪ್ಪಿಗೆಯಾಗುವಂತೆ ಇರಲಿ. ಹೊಗಳಿಕೆಯನ್ನು ನಂಬುವಿರಿ. ಅತಿಯಾದ ಖರ್ಚು ವೆಚ್ಚಗಳನ್ನು ಕಡಿತಗೊಳಿಸಿ. ನಿಮ್ಮ ಆದಾಯವು ಮೊದಲಿಗಿಂತ ಉತ್ತಮವಾಗಿದ್ದು ಅದನ್ನು ಒಂದು ಕಡೆ ಸ್ಥಿರವಾಗಿಸಿಕೊಳ್ಳಿ. ಹಿರಿಯರು ನಿಮ್ಮ‌ ಬಗ್ಗೆ ವ್ಯಂಗ್ಯವಾಗಿ ಮಾತನಾಡಬಹುದು. ಉದ್ಯೋಗದ ಕಾರಣ ದೂರ ಪ್ರಯಾಣ ಮಾಡಲು ಇಷ್ಟವಾಗದು.

ತುಲಾ ರಾಶಿ :

ಜೀವನ ಸಪ್ಪೆ ಎನಿಸದಂತೆ ಇರಿ ಅಥವಾ ಅದಕ್ಕೆ ಆತ್ಮೀಯರಿಂದ ಪರಿಹಾರವನ್ನೂ ಕಂಡುಕೊಳ್ಳಿ. ನೀವು ಅನುಮಾನ ಬರುವಂತಹ ವರ್ತನೆಯನ್ನು ತೋರಿಸುವಿರಿ. ಸ್ವಲ್ಪ ಕಾಲದ ಏನನ್ನೂ ಯೋಚಿಸದೇ ಇರಲು ಪ್ರಯತ್ನಿಸಿ. ಮನಸ್ಸಿನ ಶಕ್ತಿ ದ್ವಿಗಣವಾಗುವುದು. ನಕಾರಾತ್ಮಕತೆ ಆಲೋಚನೆಗಳೂ ದೂರವಾಗುವುದು. ಕೆಲವರು ನಿಮ್ಮ ಉಪದೇಶವನ್ನು ಎಲ್ಲರೂ ಮೆಚ್ಚಬಹುದು. ಕುಟುಂಬದ ಸಹಕಾರದಿಂದ ಸಾಧನೆ ಸುಲಭವಾಗುತ್ತದೆ. ಹೊಸ ತಂತ್ರಗಳನ್ನು ಬಳಸಿಕೊಂಡು ಸಮಸ್ಯೆಗಳನ್ನು ಪರಿಹರಿಸಿ. ಆತುರದಿಂದ ಉದ್ಯೋಗ ಬದಲಾಯಿಸಿ ಒತ್ತಡಕ್ಕೆ ಒಳಗಾಗುವಿರಿ. ಕೆಲಸಕ್ಕೆ ಮೊದಲ ಆದ್ಯತೆ ನೀಡುವಿರಿ. ನಿಮ್ಮ ಬಗ್ಗೆ ಕುಟುಂಬದ ಸದಸ್ಯರಿಗೆ ಬೇಸರ ಇರುತ್ತದೆ. ವೈಯಕ್ತಿಕ ಜೀವನದ ಬಗ್ಗೆ ಯೋಚಿಸಬೇಕಾಗುತ್ತದೆ. ಬಿಡುವಿಲ್ಲದ ಕೆಲಸ ಕಾರ್ಯಗಳಿಂದ ದೈಹಿಕವಾಗಿ ಬಳಲುವಿರಿ. ಪ್ರಯಾಣದಲ್ಲಿ ಯಾವುದೇ ತೊಂದರೆಗಳು ಬಾರದು. ಕೆಲವು ಜನರ ಭೇಟಿಯು ನಿಮಗೆ ಖುಷಿ ಕೊಡುವುದು. ಹೂಡಿಕೆಯ ವಿಚಾರದಲ್ಲಿ ಸಮಸ್ಯೆಯಾಗಬಹುದು. ಕಾನೂನಿನ ತೀರ್ಮಾನಕ್ಕೆ ತಲೆಬಾಗುವುದು ಸೂಕ್ತ.

ವೃಶ್ಚಿಕ ರಾಶಿ :

ಎಂತಹ ಸನ್ನಿವೇಶಗಳು ಬಂದರೂ ನೀವು ಮಾಡುವುದನ್ನು ಮಾಡುವಿರಿ. ಇಂದು ನಿಮ್ಮ ಕಲ್ಪನೆಯಂತೆ ಬದುಕು ನಡೆಯದು ಎಂಬ ಸತ್ಯ ತಿಳಿಯುವುದು. ದೂರಪ್ರಯಾಣ ಸುಖಕರವಾಗಿ ಇರುವಿದಾದರೂ ಅನಂತರ ಕಷ್ಟಪಡಬೇಕಾದೀತು. ಯಾರನ್ನೋ ಅವಮಾನಿಸಲು ಹೋಗಿ ಹಳ್ಳಕ್ಕೆ ಬೀಳಬೇಡಿ. ಪ್ರೀತಿಯಿಂದ ಮಾಡಿದ ಕೆಲಸ ಫಲ ನೀಡುತ್ತದೆ. ನಿನ್ನೆ ವಿಫಲವಾದದ್ದನ್ನು ಪುನಃ ಪ್ರಯತ್ನಿಸಿ ಯಶಸ್ಸು ಇಂದು ನಿಮ್ಮದಾಗಬಹುದು. ಮನಸ್ಸು ಉದ್ವಿಗ್ನವಾಗಿದ್ದರೂ ಧೈರ್ಯದಿಂದ ನಿರ್ಧಾರ ತೆಗೆದುಕೊಳ್ಳಿ. ಕಷ್ಟವೆನಿಸಿದರೂ ನಿಮ್ಮ ಮನದ ಆಶೋತ್ತರಗಳನ್ನು ಈಡೇರಿಸಿಕೊಳ್ಳುವಿರಿ. ಸಾಲದ ವ್ಯವಹಾರದಲ್ಲಿ ತೊಂದರೆ ಎದುರಾಗುತ್ತದೆ. ಸಂಗಾತಿ ಜೊತೆ ಪ್ರೀತಿ ವಿಶ್ವಾಸ ಹೆಚ್ಚುತ್ತದೆ. ನಿಮ್ಮ ಕಾರ್ಯಗಳಿಂದ ಪ್ರೀತಿಪಾತ್ರರ ಹೃದಯವನ್ನು ಗೆಲ್ಲಲು ಸಫಲರಾಗುವಿರಿ. ಬಹಳ‌ ದಿನಗಳ ಅನಂತರ ನಿಮ್ಮ ಸಂಗಾತಿಯ ಜೊತೆ ಸ್ವಲ್ಪ ಸಮಯ ಕುಳಿತು ಆಪ್ತವಾಗಿ ಮಾತನಾಡುವಿರಿ. ಯಾರನ್ನೂ ಅವಲಂಬಿಸುವುದು ನಿಮಗೆ ಕಷ್ಟವಾಗುವುದು. ಕಾದಾಟದಿಂದ ಸಮಯವು ವ್ಯರ್ಥವಾಗಲಿದೆ.

ಧನು ರಾಶಿ :

ಭಾವವು ಅರ್ಥವಾದರೆ ಮತ್ತೆಲ್ಲ ಸರಿಯಾಗುವುದು. ಆರ್ಥಿಕ ವಿಚಾರಕ್ಕೆ ಸಂಗಾತಿಯ ಜೊತೆ ವೈಮನಸ್ಯ ಉಂಟಾಗುವುದು. ಮನೆಯಲ್ಲಿ ನಿಮ್ಮ ಮಾತಿಗೆ ಬೆಲೆ ಸಿಗುತ್ತದೆ. ದಿನಚರಿಯ ವ್ಯತ್ಯಾಸದಿಂದ ಆರೋಗ್ಯ ಕೆಡಬಹುದು. ನಿಜವಾದ ಸ್ನೇಹಿತರು ನಿಮ್ಮೊಂದಿಗೆ ತಾಳ್ಮೆಯಿಂದ ಇರುತ್ತಾರೆ. ಮನೆಯ ವಿಷಯಗಳಲ್ಲಿ ಜಾಗರೂಕತೆಯ ಅಗತ್ಯವಿದೆ. ನಿಮ್ಮ ಉತ್ಕೃಷ್ಟತೆ ಮಿಂಚಲು ಅವಕಾಶ ದೊರೆಯುತ್ತದೆ. ಸಂಗಾತಿಯ ಜೊತೆ ಸಾಂತ್ವನದ ಮಾತುಗಳು ಸಂಬಂಧ ಬಲಪಡಿಸುತ್ತವೆ. ಸಮಾರಂಭಗಳಲ್ಲಿ ಭಾಗವಹಿಸಲು ಆಸಕ್ತಿ ವಹಿಸುವಿರಿ. ಎಲ್ಲರ ಜೊತೆ ಪ್ರೀತಿ ದಿಂದ ನಡೆದುಕೊಳ್ಳುವಿರಿ. ಕುಟುಂಬಕ್ಕೆ ಸಂಬಂಧಪಟ್ಟಂತೆ ಅನೇಕ ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ಸಂಗಾತಿಯ ಜೊತೆಯಿಂದ ಮನಸ್ತಾಪವು ದೂರವಾಗಲಿದೆ. ಸ್ಪರ್ಧೆಯ ವಿಷಯದಲ್ಲಿ ಮುನ್ನುಗ್ಗುವ ಸ್ವಭಾವವು ಇರಲಿದೆ. ದೂರ ಪ್ರಯಾಣವನ್ನು ನೋವು ಹೆಚ್ಚು ಇಷ್ಟಪಡುವಿರಿ. ತಂದೆಯಿಂದ ಸಹಕಾರವನ್ನು ಪಡೆಯುವಿರಿ. ನಿಮ್ಮ ನೇರ ಮಾತಿನಿಂದ ತೊಂದರೆ ಆಗಬಹುದು.

ಮಕರ ರಾಶಿ :

ಧನಹಾನಿಯಿಂದ ಕುಟುಂಬದಲ್ಲಿ ಭಿನ್ನಮತ ಉಂಟಾಗಬಹುದು. ನೀವು ಸಣ್ಣ ಬುದ್ಧಿಯನ್ನು ಬಿಟ್ಟು ವ್ಯವಹರಿಸಿದರೆ ವ್ಯಾಪರಕ್ಕೆ ಅನುಕೂಲವಿದೆ. ಅನೇಕ ಶುಭಸೂಚನೆಗಳು ನಿಮಗೆ ಕಾಣಿಸುವುದು. ನಿಮ್ಮನ್ನು ಗಮನಿಸುವವರು ಹತ್ತಾರು ಮಂದಿಯಿರುತ್ತಾರೆ. ಅವರೇನೇ ಹೇಳಿದರೂ ನಿಮ್ಮ ಸನ್ಮಾರ್ಗವನ್ನು ಬಿಡಬೇಡಿ. ಮೌನದಿಂದ ನೀವು ಕೆಲಸವನ್ನು ಸಾಧಿಸಿಕೊಳ್ಳುವಿರಿ ಧೈರ್ಯದಿಂದ ನಿಂತು, ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ. ಬುದ್ಧಿವಂತಿಕೆಯೊಂದಿಗೆ ಸಮಸ್ಯೆಗಳಿಗೆ ಪರಿಹಾರ ಹುಡುಕಿ. ಕೆಲವು ಸಮಸ್ಯೆಗಳು ಮರುಕಳಿಸುತ್ತವೆ. ಆತ್ಮೀಯರ ಸಹಕಾರ ದೊರೆಯುವ ಕಾರಣ ನೆಮ್ಮದಿಗೆ ಕೊರತೆ ಇಲ್ಲ. ಇಷ್ಟವಿಲ್ಲದಿದ್ದರೂ ವಿವಾಹ ಮಾತುಕತೆ ನಡೆಯಲಿದೆ. ಕೆಲಸ ಕಾರ್ಯಗಳಲ್ಲಿ ನಿಮ್ಮಲ್ಲಿದ್ದ ಉತ್ಸಾಹ ಕಡಿಮೆಯಾಗಲಿದೆ. ಕೆಲವೊಂದು ಕೆಲಸ ಕಾರ್ಯಗಳು ಅಪೂರ್ಣಗೊಳ್ಳಲಿದೆ. ಪಾಲುದಾರಿಕೆಯಲ್ಲಿ ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಹಣಿಸುವಿರಿ. ಸಹೋದ್ಯೋಗಿಗಳ ಕಿರಿಕಿರಿಯಿಂದ ಉದ್ಯೋಗವನ್ನು ಬದಲಿಸುವಿರಿ.

ಕುಂಭ ರಾಶಿ :

ನಿಮ್ಮ ಹಲವು ದಿನದ ವ್ರತಕ್ಕೆ ಭಂಗಬರಬಹುದು. ಇಂದು ನಿಮ್ಮ ಕೆಲವು ಮಾತುಗಳು ಬೇರೆಯವರು ಆತುರದ ನಿರ್ಧಾರವನ್ನು ತೆಗದುಕೊಳ್ಳುವಂತೆ ಮಾಡಬಹುದು. ಕುಟುಂಬದ ಅಪರೂಪದ ವ್ಯಕ್ತಿಗಳನ್ನು ಭೇಟಿಯಾಗುವ ಸಂದರ್ಭ ಬರಬಹುದು. ಸ್ನೇಹಿತರ ಮಾತುಗಳ ಹಿಂದಿನ ವ್ಯಂಗ್ಯಾರ್ಥವನ್ನು ಹುಡುಕಲು ಯತ್ನಿಸುವಿರಿ. ಮನೆಯ ತೊಡಕುಗಳನ್ನು ಧೈರ್ಯದಿಂದ ಎದುರಿಸಬೇಕು. ವೈಯಕ್ತಿಕ ಬದ್ಧತೆಗಳು ಬಲವಾದ ನಂಬಿಕೆಯನ್ನು ಹುಟ್ಟುಹಾಕುತ್ತವೆ. ಕೆಲಸದಲ್ಲಿ ಜವಾಬ್ದಾರಿ ಬದಲಾಗಬಹುದು. ಆತ್ಮೀಯ ಸ್ನೇಹಿತರ ಒಡನಾಟ ಮನದ ಸಂತೋಷವನ್ನು ಹೆಚ್ಚಿಸುತ್ತದೆ. ಬೇರೆಯವರ ವಿಚಾರವಾಗಿ ಕುಟುಂಬದಲ್ಲಿ ಅಶಾಂತಿ ಮೂಡುತ್ತದೆ. ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಅನವಶ್ಯಕ ಸಮಯವೂ ವ್ಯರ್ಥವಾಗಲಿದೆ. ಇದರಿಂದ ನೀವು ಯಾವುದೇ ಕೆಲಸ ಮಾಡಲು ಬಯಸುವುದಿಲ್ಲ. ವ್ಯಾಪಾರ ಮಾಡುವ ಜನರ ಜೊತೆ ಸೇರಿ ಕೆಲವು ಕೆಲಸಗಳನ್ನು ಮಾಡಲು ಅವಕಾಶವಿದೆ. ನೀವು ಎಣಿಸಿದ್ದನ್ನು ಬಂಧುಗಳು ಮಾಡಿಕೊಡುವರು.

ಮೀನ ರಾಶಿ :

ಪರರ ಇಂಗಿತವನ್ನು ಅರಿತು ಮಾಡುವ ಕೆಲಸಕ್ಕೆ ಪ್ರಶಂಸೆ. ನಿಮ್ಮ ಬಳಿ ಧಾರ್ಮಿಕ ಕಾರ್ಯಗಳಿಗೆ ಹಣವನ್ನು ಕೇಳಬಹುದು. ಇದನ್ನು ನೀವು ಪ್ರೀತಿಯಿಂದ ಕೊಡುವಿರಿ. ದಿಟ್ಟತನದ ನಡೆ ನುಡಿ ಕೆಲವರಲ್ಲಿ ಬೇಸರ ಮೂಡಿಸುತ್ತದೆ. ಪಾಲುಗಾರಿಕೆಯ ವ್ಯವಹಾರದಲ್ಲಿ ತೊಡಗಿಸಿದ್ದ ಹಣವನ್ನು ಮರಳಿ ಪಡೆಯುವಿರಿ. ಹೊಸ ಪ್ರಸ್ತಾವನೆಗಳನ್ನು ಪಾಲುದಾರರ ಮುಂದೆ ಇಡಬೇಡಿ. ನಿಮ್ಮೊಳಗಿನ ಶಾಂತಿಯೇ ನಿಮ್ಮ ಉತ್ತಮ ಸ್ನೇಹಿತನಾಗಲಿದೆ. ತಾತ್ವಿಕ ಚಿಂತನೆಗಳು ಇಂದು ನಿಮಗೆ ದಾರಿದೀಪವಾಗುತ್ತದೆ. ಮನೆಯವರೊಂದಿಗೆ ಸಮಯ ಕಳೆಯುವುದು ಸಂತೋಷ ತರುತ್ತದೆ. ಸಂಗಾತಿಯ ಜೊತೆಯಲ್ಲಿ ಉತ್ತಮ ಪ್ರೀತಿ ವಿಶ್ವಾಸ ಇರಲಿದೆ. ಸಂದೇಹ ಬಂದವರ ಜೊತೆ ಸಹವಾಸ ಇರದು. ಜೀವನದಲ್ಲಿ ಹೊಸ ರೀತಿಯ ಕೆಲಸವನ್ನು ಮಾಡುವ ಸಾಮರ್ಥ್ಯವಿರುತ್ತದೆ. ಬಂಧುಗಳು ಮನೆಗೆ ಬಂದ ಕಾರಣ ಖರ್ಚು ಹೆಚ್ಚಾದೀತು. ನಿಮ್ಮ ಸಣ್ಣ ಮನಸ್ಸನ್ನು ಅವರಿಗೆ ತೋರಿಸಬೇಡಿ. ಉನ್ನತ ಅಧ್ಯಯನವನ್ನು ಬಯಸಿ ಬೇರೆ ಕಡೆಗೆ ತೆರಳುವಿರಿ. ವ್ಯರ್ಥ ಸುತ್ತಾಟದಿಂದ ನೀವು ಸಿಟ್ಟಾಗುವಿರಿ.

TV9 Kannada

Views: 25

Leave a Reply

Your email address will not be published. Required fields are marked *