ಚಿತ್ರದುರ್ಗ ಅ. 06
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆವತಿಯಿಂದ ಚಿತ್ರದುರ್ಗದಲ್ಲಿ ಡಿ.07 ರಂದು ನಡೆಯಲಿರುವ 1008 ರೈತ ಕುಟುಂಬಕ್ಕೆ ಉಚಿತ ಸಾಮೂಹಿಕ ವಿವಾಹ ಸಮಾವೇಶಕ್ಕೆ ಭರ ಸಿದ್ದತೆ ನಡೆಯುತ್ತಿದೆ, ಇನ್ನು ವಿವಿಧ ಜಿಲ್ಲೆಗಳಿಂದ ವಿವಾಹಕ್ಕಾಗಿ ಗಂಡು-ಹೆಣ್ಣನ್ನು ನೊಂದಾಯಿಸುವವರು ಶೀಘ್ರವಾಗಿ ನೊಂದಾಯಿ ಸುವಂತೆ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ಸಂಸ್ಥಾಪಕ ಅಧ್ಯಕ್ಷರು ಕಾರ್ಯಕ್ರಮದ ಸಂಚಾಲಕರಾದ ಚಂದ್ರಶೇಖರ್ ಬಿ,ಟಿ,ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ 1008 ರೈತ ಕಲ್ಯಾಣೋತ್ಸವ ಸಮಾವೇಶದ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಹಲವಾರು ತಿಂಗಳುಗಳಿಂದ ಈ ಕಾರ್ಯಕ್ರಮಕ್ಕಾಗಿ ಸಕಲ ಸಿದ್ದತೆಯನ್ನು ಮಾಡಲಾಗುತ್ತಿದೆ ಇಂದಿನ ದಿನಮಾನದಲ್ಲಿ ಒಂದು ಮದುವೆ ಎಂದು ಲಕ್ಷಾಂತರ ರೂ ವೆಚ್ಚವಾಗುತ್ತದೆ ಇದಕ್ಕಾಗಿ ಸಾಲವನ್ನು ಮಾಡಬೇಕು ಇಲ್ಲವೆ ಇದ್ದ ಹೊಲವನ್ನು ಮಾರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ, ಇದನ್ನು ತಪ್ಪಿಸುವ ಸಲುವಾಗಿ ಈ ಕಾರ್ಯಕ್ರವನ್ನು ಏರ್ಪಡಿಸಲಾಗಿದೆ. ಇದರಲ್ಲಿ ಭಾಗವಹಿಸಿ ಯಾವುದೇ ಖರ್ಚು ಇಲ್ಲದೆ ಮದುವೆಯನ್ನು ಮಾಡಿಕೊಳ್ಳ ಬಹುದಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಸುಮಾರು 12 ಕೋಟಿ ವೆಚ್ಚವಾಗಲಿದೆ ಈಗಾಗಲೇ ಹಲವಾರು ದಾನಿಗಳು ಹಲವಾರು ವಸ್ತುಗಳನ್ನು ನೀಡಲು ಮುಂದೆ ಬಂದಿದ್ದಾರೆ, ಈ ವಿವಾಹ ಕಾರ್ಯಕ್ರಮವೂ ಜಗದ್ಗುರು ಶಂಕರಚಾರ್ಯ ಶ್ರೀ ಭಾರತಿ ತೀರ್ಥ ಮಹಾ ಸನ್ನಿಧಾನಂನ ಶ್ರೀಗಳ ಆರ್ಶೀವಾದದೊಂದಿಗೆ, ಜಗದ್ಗುರು ಶಂಕರಚಾರ್ಯ ಶ್ರೀ ವಿಧುಶೇಖರ ಭಾರತಿ ಮಹಾ ಸನ್ನಿಧಾನಂನರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ, ಇದರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆಯವರು 1008 ತಾಳಿಗಳನ್ನು ನೀಡುವುದಾಗಿ ತಿಳಿಸಿದ್ದಾರೆ.
ಇದ್ದಲ್ಲದೆ ರಾಜ್ಯದ ಹಲವಾರು ಜನತೆ ಈ ಕಾರ್ಯಕ್ರಮಕ್ಕೆ ಸಹಾಯವನ್ನು ಮಾಡಿದ್ದಾರೆ, ಇಲ್ಲಿ ವಿವಾಹವಾಗುವ ಮಧು-ವರರಿಗೆ ಪಾತ್ರೆ, ಬಾಂಡೆ, ಸಾಮಾಗ್ರಿಗಳು, ವಸ್ತ್ರಗಳು ಬಟ್ಟೆಗಳನ್ನು ನೀಡಲಾಗುವುದು, ಈ ವಧು-ವರರಿಗೆ ಸರ್ಕಾರ ಸುಮಾರು 5 ಲಕ್ಷ ರೂ ವೆಚ್ಚದಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಂಡುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಈಗಾಗಲೇ ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 900 ಅರ್ಜಿಗಳು ಬಂದಿವೆ ಇದರಲ್ಲಿ ನಮ್ಮ ಸಮಿತಿ ಸರಿಯಾದ ರೀತಿಯಲ್ಲಿ ಮದುವೆಗೆ ನಿಗಧಿಯಾದ ವಯಸ್ಸು ಇದ್ದವರಿಗೆ ಮಾತ್ರ ವಿವಾಹವನ್ನು ಮಾಡಲಾಗುವುದು. ಕಡಿಮೆ ವಯಸ್ಸು ಇದ್ದವರನ್ನು ತಿರಸ್ಕಾರ ಮಾಡಲಾಗುವುದು, ಡಿ. 7ರಂದು ಬೆಳಿಗ್ಗೆ 10.30 ರಿಂದ 11.30ರವರೆಗೆ ವಿವಾಹ ನಡೆಯಲಿದೆ, ಸುಮಾರು 12 ಕೋಟಿ ವೆಚ್ಚದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಈಗ 6 ರಿಂದ 7 ಕೋಟಿಯಷ್ಟು ನೆರವು ಸಿಕ್ಕಿದೆ ಇನ್ನೂ 5 ಕೋಟಿ ಯಷ್ಟು ನೆರವು ದೊರಕಬೇಕಿದೆ ರಾಜ್ಯದಲ್ಲಿನ ದಾನಿಗಳು ಮುಂದೆ ಬಂದು ಈ ವಿವಾಹ ಕಾರ್ಯಕ್ರಮಕ್ಕೆ ನೆರವಾಗಬೇಕೆಂದು ಮನವಿ ಮಾಡಿದ್ದಾರೆ.
ಈ ಕಾರ್ಯಕ್ರಮವೂ ಚಿತ್ರದುರ್ಗ ನಗರದ ಹೊರ ವಲಯದ ಮಾದಾರ ಚನ್ನಯ್ಯಸ್ವಾಮಿ ಮಠದ ಪಕ್ಕದಲ್ಲಿನ ಬಡಗಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಜಾಕೀರಹುಸೇನೆರವರು ಬಡಗಿ ನಿವೇಶನದ ಜಾಗದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆವತಿಯಿಂದ ಇದೊಂದು ಕ್ರಾಂತಿಕಾರಿಕ ಕಾರ್ಯಕ್ರಮವಾಗಿದೆ ರಾಜ್ಯದಲ್ಲಿ ಈ ರೀತಿಯಾದ ಕಾರ್ಯಕ್ರಮವನ್ನು ಯಾರೂ ಸಹಾ ಮಾಡಿಲ್ಲ, ಇದು ಪೂರ್ಣ ಪ್ರಮಾಣದಲ್ಲಿ ರೈತರಿಗಾಗಿಯೇ ಮಾಡಿರುವ ಕಾರ್ಯಕ್ರಮ ಇದ್ದಾಗಿದೆ, ಇದರಲ್ಲಿ ರೈತ ಬಾಂಧವರು ಭಾಗವಹಿಸುವುದರ ಮೂಲಕ ಉಚಿತವಾಗಿ ತಮ್ಮ ಮಕ್ಕಳ ವಿವಾಹವನ್ನು ಮಾಡಬೇಕಿದೆ ಎಂದು ಚಂದ್ರಶೇಖರ್ ಕರೆ ನೀಡಿದರು.
ಬಡಗಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಜಾಕೀರಹುಸೇನ್ ಮಾತನಾಡಿ ಇಂದಿನ ದಿನಮಾನದಲ್ಲಿ ರೈತ ಮಕ್ಕಳಿಗೆ ಹೆಣ್ಣು ಸಿಗುವುದು ಕಷ್ಢವಾಗುತ್ತಿದೆ ಈ ಸಮಯದಲ್ಲಿ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆವತಿಯಿಂದ ಚಿತ್ರದುರ್ಗದಲ್ಲಿ 1008 ರೈತ ಕಲ್ಯಾಣೋತ್ಸವ ನಡೆಸುತ್ತಿರುವುದು ಸ್ವಾಗತಾರ್ಹವಾಗಿದೆ, ಇದಕ್ಕೆ ನಮ್ಮ ಬಡಗಿ ಕಾರ್ಮೀಕರ ನಿವೇಶನದ ಜಾಗವನ್ನು ಉಪಯೋಗ ಮಾಡಿಕೊಳ್ಳಲು ನೀಡಲಾಗಿದೆ, ಒಂದು ಮದುವೆಯನ್ನು ಮಾಡಬೇಕಾದರೆ ಲಕ್ಷಾಂತರ ರೂ ವೆಚ್ಚವಾಗುತ್ತದೆ ಇದರ ಬದಲು ಈ ರೀತಿಯಾದ ಸಮೂಹಿಕ ವಿವಾಹ ಮಹೋತ್ಸವದಲ್ಲಿ ಭಾಗವಹಿಸಿ ಮದುವೆ ಮಾಡುವುದರಿಂದ ಅರ್ಥಿಕವಾಗಿ ಸಹಾಯವಾಗುತ್ತದೆ ಎಂದು ತಿಳಿಸಿದರು.
ಈ ಪೂರ್ವಬಾವಿ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ಮಹಿಳಾ ರಾಜ್ಯಾಧ್ಯಕ್ಷರಾದ ದೇವಮ್ಮ, ರಾಜ್ಯ ವರಿಷ್ಠರಾದ ಮೈಸೂರು ರಮಾನಂದ್, ನ್ಯಾಯವಾದಿ ತೇಜಸ್ವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಕೆ.ಆರ್.ಪೇಟೇ, ರಾಜ್ಯ ಸಂಚಾಲಕ ಸಿದ್ದೇಶ್, ರಾಜ್ಯ ಮಹಿಳಾ ಕಾರ್ಯದರ್ಶಿ ಜ್ಯೋತಿ ಪ್ರದೀಪ್, ರಾಜ್ಯ ಕಾರ್ಯದರ್ಶಿ ರಮೇಶ್, ತೇಜು, ರಾಜ್ಯ ಮಹಿಳಾ ಕೃಷಿ ರಾಯಬಾರಿ ಭೂಮಿಕ ದೇಶಪಾಂಡೆ, ಬೆಂಗಳೂರು ಮಹಿಳಾ ನಗರ ಅಧ್ಯಕ್ಷೆ ಲತಾ, ರಾಜ್ಯ ಸಂಚಾಲಕ ಕೃಷ್ಣಮೂರ್ತಿ, ಮಂಜುಳ, ಅಶೋಕ್ ಮಾರುತಿ ಸೇರಿದಂತೆ ಇತರರು ಭಾಗವಹಿಸಿದ್ದರು.
Views: 13