ಇಂದಿನ ಪಂಚಾಂಗ (12 ಸೆಪ್ಟೆಂಬರ್ 2026)
- ಶಕೆ ಹಾಗೂ ಸಂವತ್ಸರ: ಶಾಲಿವಾಹನ ಶಕೆ 1949, ಪರಾಭವ ಸಂವತ್ಸರ
- ಆಯನ ಹಾಗೂ ಋತು: ದಕ್ಷಿಣಾಯನ, ವರ್ಷ ಋತು
- ಮಾಸ: ಚಾಂದ್ರಮಾಸ – ಭಾದ್ರಪದ, ಸೌರ ಮಾಸ – ಸಿಂಹ
- ನಕ್ಷತ್ರ: ಮಹಾನಕ್ಷತ್ರ – ಪೂರ್ವಾಫಲ್ಗುಣೀ, ನಿತ್ಯನಕ್ಷತ್ರ – ಉತ್ತರಾಫಲ್ಗುಣೀ
- ವಾರ, ಪಕ್ಷ ಹಾಗೂ ತಿಥಿ: ಶನಿವಾರ, ಶುಕ್ಲ ಪಕ್ಷ, ಪ್ರತಿಪತ್
- ಯೋಗ ಹಾಗೂ ಕರಣ: ಶುಭ ಯೋಗ, ಬವ ಕರಣ
- ಸೂರ್ಯೋದಯ ಮತ್ತು ಸೂರ್ಯಾಸ್ತ: ಬೆಳಗ್ಗೆ 06:09 – ಸಂಜೆ 06:21
- ಶುಭಾಶುಭ ಕಾಲಗಳು:
- ರಾಹು ಕಾಲ: 09:13 – 10:44
- ಯಮಗಂಡ ಕಾಲ: 13:47 – 15:19
- ಗುಳಿಕ ಕಾಲ: 06:10 – 07:41
ಇಂದಿನ ರಾಶಿ ಭವಿಷ್ಯ
ಮೇಷ ರಾಶಿ ನಿಮ್ಮ ಆತುರದ ಮಾತುಗಳು ಬೇರೆಯವರಿಗೆ ಗೊಂದಲ ಮೂಡಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಓದಿನ ಕಡೆಗೆ ಸಮಯ ಹೊಂದಿಸಿಕೊಳ್ಳುವುದು ಸವಾಲಾಗಲಿದೆ. ಸೂಕ್ತ ವಾತಾವರಣದ ಕೊರತೆ ಎದುರಾಗಬಹುದು. ಇತರರ ಒತ್ತಾಯಕ್ಕೆ ಮಣಿದು ಬಂಡವಾಳ ಹೂಡಿಕೆ ಮಾಡದಿರುವುದು ಒಳಿತು. ಆಡಳಿತಾತ್ಮಕ ಕೆಲಸಗಳಲ್ಲಿ ಹೊಂದಾಣಿಕೆ ಕಷ್ಟವಾಗಲಿದ್ದು, ಅಪೂರ್ಣ ಮಾಹಿತಿಯೊಂದಿಗೇ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಬರಬಹುದು. ಉದ್ಯೋಗದಲ್ಲಿ ಬಡ್ತಿ ಸಿಕ್ಕಿತೆಂದು ಅಹಂಕಾರ ಪಡುವುದು ಬೇಡ.
ವೃಷಭ ರಾಶಿ ಯಾವುದೇ ಕೆಲಸವನ್ನು ಅತಿಯಾದ ಒತ್ತಡದಿಂದ ಮಾಡುವುದು ಬೇಡ. ನೀವು ಉದ್ಯೋಗ ಕಳೆದುಕೊಂಡರೆ ಅದು ನಿಮ್ಮ ವಿರೋಧಿಗಳಿಗೆ ಸಂತಸ ತರಬಹುದು. ಸಣ್ಣಪುಟ್ಟ ಖರ್ಚುಗಳೇ ಆರ್ಥಿಕವಾಗಿ ದೊಡ್ಡ ಹೊರೆಯಾಗಲಿವೆ. ಇಂದು ನಿರೀಕ್ಷೆಗೂ ಮೀರಿ ಹಣ ವ್ಯಯವಾಗುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ನಿಧಾನಗತಿಯ ಸುಧಾರಣೆ ಕಂಡುಬರಲಿದೆ. ಕೈಲಿದ್ದನ್ನು ಜತನದಿಂದ ಕಾಯ್ದುಕೊಳ್ಳಿ. ಕಲಾಕ್ಷೇತ್ರದಲ್ಲಿರುವವರಿಗೆ ಬೆಂಬಲಿಗರ ಸಂಖ್ಯೆ ವೃದ್ಧಿಸಲಿದೆ. ಬೆಲೆಬಾಳುವ ವಸ್ತುಗಳನ್ನು ಕಳೆದುಕೊಳ್ಳುವ ಭೀತಿ ಇರುವುದರಿಂದ ಎಚ್ಚರ.
ಮಿಥುನ ರಾಶಿ ಅಕಾರಣವಾಗಿ ಮನಸ್ಸಿನಲ್ಲಿ ಆತಂಕ ಅಥವಾ ಬೇಸರ ಆವರಿಸಬಹುದು. ಕಷ್ಟಕರವಾದ ಕಾರ್ಯಗಳನ್ನು ಎದೆಗುಂದದೆ ಸಾಧಿಸುವ ಧೈರ್ಯ ನಿಮ್ಮಲ್ಲಿರಲಿದೆ. ಕೋಪ ಸಹಜವಾದರೂ ಅದನ್ನು ನಿಯಂತ್ರಿಸುವ ಕಲೆಯನ್ನು ರೂಢಿಸಿಕೊಳ್ಳುವುದು ಒಳಿತು. ಸರಿಯಾದ ಸಂವಹನವಿಲ್ಲದೆ ಕೆಲಸಗಳು ಹಾಳಾಗಬಹುದು. ನಿಮ್ಮ ಯೋಜನೆಗಳು ವಾಸ್ತವಕ್ಕೆ ಹತ್ತಿರವಾಗಿರಲಿ. ಏಕಾಗ್ರತೆಯಿಂದ ಕರ್ತವ್ಯ ನಿರ್ವಹಿಸುವಿರಿ ಮತ್ತು ಹೊಸ ಸ್ನೇಹಿತರ ಬಳಗವನ್ನು ಸೃಷ್ಟಿಸಿಕೊಳ್ಳುವಿರಿ.
ಕರ್ಕಾಟಕ ರಾಶಿ ಘಟನೆ ನಡೆದುಹೋದ ಮೇಲೆ ಪಶ್ಚಾತ್ತಾಪ ಪಡುವುದರಲ್ಲಿ ಯಾವುದೇ ಅರ್ಥವಿಲ್ಲ. ಫಲಾಪೇಕ್ಷೆ ಇಲ್ಲದೆ ಕರ್ತವ್ಯ ನಿಭಾಯಿಸಿದಾಗ ಮಾತ್ರ ಯಶಸ್ಸು ಒಲಿಯುತ್ತದೆ. ಎಲ್ಲೆಡೆ ನಿಮ್ಮ ಪ್ರಾಮಾಣಿಕತೆಯನ್ನು ಸಾಬೀತುಪಡಿಸುವ ಅಗತ್ಯವಿಲ್ಲ. ಉತ್ತಮ ಜಮೀನು ಖರೀದಿಯ ಯೋಗವಿದೆ. ಕೋಪ ನಿಯಂತ್ರಣ ಸವಾಲಾಗಲಿದ್ದು, ಕೌಟುಂಬಿಕ ವಿಚಾರಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು. ನಿಮ್ಮ ಸಣ್ಣತನದಿಂದಲೇ ದೊಡ್ಡ ಲಾಭ ಕೈತಪ್ಪುವ ಸಾಧ್ಯತೆ ಇದೆ. ತಪ್ಪು ಮಾಡಿದಾಗ ಕ್ಷಮೆ ಕೇಳಲು ಹಿಂಜರಿಯದಿರಿ.
ಸಿಂಹ ರಾಶಿ ಉದ್ಯೋಗ ಸ್ಥಳದಲ್ಲಿ ನಿಮ್ಮ ಕಾರ್ಯವೈಖರಿಗೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಲಿದೆ. ಅಸಾಧ್ಯವನ್ನು ಸಾಧಿಸುವ ಛಲ ಮೂಡಲಿದೆ. ವ್ಯವಹಾರದಲ್ಲಿ ಉಂಟಾಗುವ ಹಿನ್ನಡೆಯ ಮುನ್ಸೂಚನೆ ನಿಮಗೆ ಮೊದಲೇ ಸಿಗಲಿದೆ. ಹಳೆಯ ನೆನಪುಗಳು ಮರುಕಳಿಸಲಿವೆ. ಪಾಲುದಾರಿಕೆ ವ್ಯವಹಾರದಲ್ಲಿ ಅಸಮಾಧಾನ ಮೂಡುವ ಸಾಧ್ಯತೆ ಇದೆ. ಮಕ್ಕಳ ವಿಚಾರದಲ್ಲಿ ನಿಮ್ಮ ಸೋಲೊಪ್ಪಿಕೊಳ್ಳುವುದು ಜಾಣತನ. ಸಭ್ಯತೆಯಿಂದ ಇಂದಿನ ವ್ಯವಹಾರಗಳನ್ನು ನಿಭಾಯಿಸಿ. ನಿಮ್ಮ ಸ್ಥಾನಮಾನ ಉಳಿಸಿಕೊಳ್ಳಲು ಇತರರನ್ನು ದೂಷಿಸದಿರಿ.
ಕನ್ಯಾ ರಾಶಿ ನಿಮ್ಮ ಸಮಸ್ಯೆಗಳಿಗೆ ಇತರರನ್ನು ಹೊಣೆ ಮಾಡುವುದು ಸರಿಯಲ್ಲ. ಆರ್ಥಿಕ ಹರಿವು ತುಸು ತಗ್ಗಲಿದೆ. ಆಪ್ತರನ್ನು ಕಳೆದುಕೊಂಡು ದುಃಖಿಸುವ ಪರಿಸ್ಥಿತಿ ಎದುರಾಗಬಹುದು. ನಿಮ್ಮ ಆತಂಕ ಸ್ನೇಹಿತರಿಗೆ ಅರಿವಾಗಲಿದೆ. ಕಲಾಕ್ಷೇತ್ರದವರಿಗೆ ದೂರದ ಪ್ರಯಾಣದ ಯೋಗವಿದೆ. ನಿದ್ರಾಹೀನತೆಯಿಂದಾಗಿ ಕೆಲಸದಲ್ಲಿ ಉತ್ಸಾಹ ಕುಗ್ಗಲಿದ್ದು, ಉದ್ಯೋಗದಲ್ಲಿ ಅಸ್ಥಿರತೆ ಕಾಡಬಹುದು. ಸಂಗಾತಿಯ ಭಾವನೆಗಳಿಗೆ ಬೆಲೆ ಕೊಟ್ಟು ಅವರನ್ನು ಸಂತೋಷಪಡಿಸುವಿರಿ. ದಾಂಪತ್ಯದಲ್ಲಿ ಹೊಂದಾಣಿಕೆ ಕಷ್ಟವಾಗುವ ಲಕ್ಷಣಗಳಿವೆ.
ತುಲಾ ರಾಶಿ ನಿಮ್ಮಲ್ಲಿರುವ ಸ್ಥಿರಾಸ್ತಿಯ ಆಧಾರದ ಮೇಲೆ ಸಾಲ ಸೌಲಭ್ಯ ದೊರಕುವ ಸಾಧ್ಯತೆ ಇದೆ. ಹೊಸ ಸಂಬಂಧಗಳು ಬೆಸೆಯಲಿವೆ. ನಿರಂತರವಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ನಿಮಗೆ ಖುಷಿ ಕೊಡಲಿದೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಬಹುದು. ನಿಮ್ಮ ಮಾತಿನಲ್ಲಿ ಕೋಪ ಎದ್ದು ಕಾಣಲಿದೆ. ವಾಹನ ರಿಪೇರಿಯಿಂದಾಗಿ ಹಣ ಖರ್ಚಾಗಲಿದೆ. ಮಾರಾಟ ವಲಯದಲ್ಲಿ ಸಾಧಾರಣ ಲಾಭ ನಿರೀಕ್ಷಿಸಬಹುದು. ಹಳೆಯ ಘಟನೆಗಳು ಕಾಡಬಹುದು. ಆತಂಕದಿಂದ ಹೊರಬರಲು ಪ್ರಯತ್ನಿಸುವಿರಿ. ಇಂದಿನ ದಿನ ಬಹುಬೇಗನೆ ಕಳೆದಂತೆ ಭಾಸವಾಗಲಿದೆ.
ವೃಶ್ಚಿಕ ರಾಶಿ ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದಿರಬಹುದು. ಬುದ್ಧಿವಂತಿಕೆಯಿಂದ ಪರಿಸ್ಥಿತಿ ನಿಭಾಯಿಸುವ ಚಾಣಾಕ್ಷತನ ಅತ್ಯಗತ್ಯ. ಸರ್ಕಾರಿ ಸೌಲಭ್ಯಗಳ ನಿರೀಕ್ಷೆಯಲ್ಲಿರುವಿರಿ. ಯಶಸ್ಸನ್ನು ಸಾಧಿಸುವ ಹಂಬಲ ಹೆಚ್ಚಾಗಲಿದೆ. ಸಿಬ್ಬಂದಿಗಳ ಕಾರ್ಯವೈಖರಿ ಬೇಸರ ತರಿಸಬಹುದು. ಅಗತ್ಯಕ್ಕೆ ತಕ್ಕಂತೆ ಹೆಜ್ಜೆ ಇಡುವುದು ಒಳಿತು. ಸಮಯ ವ್ಯರ್ಥ ಮಾಡದೆ ಆದಾಯ ಹೆಚ್ಚಿಸುವತ್ತ ಗಮನ ಹರಿಸಿ. ಮನೆಯಲ್ಲಿ ಒಂಟಿತನ ಕಾಡುವ ಮೂಲಕ ಕೆಲಸದಲ್ಲಿ ನಿರಾಸಕ್ತಿ ಮೂಡುವ ಸಾಧ್ಯತೆ ಇದೆ.
ಧನು ರಾಶಿ ಮನೆ ರಿಪೇರಿ ಅಥವಾ ನವೀಕರಣದ ಬಗ್ಗೆ ಚಿಂತನೆ ನಡೆಸುವಿರಿ. ಸಂಗಾತಿಗೆ ಅವಮಾನವಾಗದಂತೆ ನಡೆದುಕೊಳ್ಳಿ, ಇದು ಭವಿಷ್ಯದಲ್ಲಿ ಸಮಸ್ಯೆಯಾಗಬಹುದು. ಅತಿಥಿಗಳ ಸತ್ಕಾರದಿಂದ ಮನಸ್ಸಿಗೆ ಮುದ ಸಿಗಲಿದೆ. ಆರ್ಥಿಕ ಸ್ಥಿತಿ ಸಮಾಧಾನಕರವಾಗಿರಲಿದೆ. ಕುಟುಂಬದಲ್ಲಿ ಒಗ್ಗಟ್ಟು ಕಾಪಾಡಿಕೊಳ್ಳಿ. ಜಮೀನು ವ್ಯವಹಾರಗಳಿಗಾಗಿ ಪ್ರಭಾವಿ ವ್ಯಕ್ತಿಗಳ ಸಂಪರ್ಕ ಬೆಳೆಸಬೇಕಾಗಬಹುದು. ಆಸ್ತಿ ವಿಚಾರಗಳು ನಿಮ್ಮನ್ನು ಚಿಂತೆಗೀಡುಮಾಡಬಹುದು.
ಮಕರ ರಾಶಿ ನಿಮ್ಮ ಪ್ರಮುಖ ದಾಖಲೆಗಳನ್ನು ಯಾವುದೇ ಕಾರಣಕ್ಕೂ ಇತರರ ಕೈಗೆ ನೀಡಬೇಡಿ. ಸ್ನೇಹಿತರಿಂದ ಉಡುಗೊರೆ ಪ್ರಾಪ್ತಿಯಾಗುವ ಯೋಗವಿದೆ. ಸಮಾಜಮುಖಿ ಕಾರ್ಯಗಳಿಂದ ಗೌರವ ಹೆಚ್ಚಾಗಲಿದೆ. ಮಕ್ಕಳ ಸಾಧನೆ ಪೋಷಕರಿಗೆ ಆನಂದ ತರಲಿದೆ. ವಾಹನ ಚಲಾಯಿಸುವಾಗ ಜಾಗರೂಕತೆ ಅತ್ಯಗತ್ಯ. ಶತ್ರುಗಳೇ ನಿಮ್ಮ ವ್ಯವಹಾರದಲ್ಲಿ ಮಧ್ಯವರ್ತಿಗಳಾಗಿ ಬರುವ ಸಾಧ್ಯತೆ ಇದೆ. ಹಿರಿಯರಿಗೆ ಮತ್ತು ಪೂಜ್ಯರಿಗೆ ಆತಿಥ್ಯ ನೀಡಿ. ವ್ಯವಹಾರದಲ್ಲಿ ಸ್ವಲ್ಪ ಮಟ್ಟಿನ ರಿಸ್ಕ್ ತೆಗೆದುಕೊಳ್ಳಬೇಕಾದೀತು.
ಕುಂಭ ರಾಶಿ ಯಾವುದಕ್ಕೂ ಅತಿಯಾಗಿ ತಲೆಕೆಡಿಸಿಕೊಳ್ಳದೆ ಕೆಲಸದಲ್ಲಿ ಮಗ್ನರಾಗುವಿರಿ. ಆಡಿದ ಮಾತಿಗೆ ಕ್ಷಮೆ ಯಾಚಿಸುವ ಪ್ರಸಂಗ ಎದುರಾಗಬಹುದು. ವಿವಾಹ ಸಂಬಂಧಿ ಮಾತುಕತೆಗಳು ವೇಗ ಪಡೆದುಕೊಳ್ಳಲಿವೆ. ನಿಮ್ಮ ಸುರಕ್ಷತೆಯನ್ನು ನೀವೇ ಕಾಪಾಡಿಕೊಳ್ಳುವುದು ಉತ್ತಮ. ಸಂಗಾತಿಯ ಮೇಲಿನ ಗೌರವ ಕೊಂಚ ಕಡಿಮೆಯಾದಂತೆ ಭಾಸವಾಗಬಹುದು. ಕೋಪದ ಹಿಂದಿನ ಕಾರಣವನ್ನು ಹೇಳಿಕೊಳ್ಳಲು ನೀವು ಇಷ್ಟಪಡುವುದಿಲ್ಲ. ಆದಾಯಕ್ಕಾಗಿ ಪರ್ಯಾಯ ವೃತ್ತಿ ಅವಲಂಬಿಸುವ ಸಾಧ್ಯತೆ ಇದೆ. ಸಣ್ಣ ಪ್ರಮಾಣದಲ್ಲಿ ಮಾತ್ರ ಬಂಡವಾಳ ಹೂಡಿಕೆ ಮಾಡಿ.
ಮೀನ ರಾಶಿ ಸರ್ಕಾರಿ ಕೆಲಸಗಳಲ್ಲಿ ವಿಳಂಬವಾಗಿ ಅಲೆದಾಟ ಹೆಚ್ಚಾಗಬಹುದು. ಆರ್ಥಿಕ ಸಹಾಯವನ್ನು ನಿರೀಕ್ಷಿಸುವಿರಿ. ತಾಳ್ಮೆಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಹಿರಿಯರ ಮಾರ್ಗದರ್ಶನದಲ್ಲಿ ವಿವಾಹ ಕಾರ್ಯಗಳು ನೆರವೇರಲಿವೆ. ಭವಿಷ್ಯದ ದೃಷ್ಟಿಯಿಂದ ಮಕ್ಕಳಿಗೆ ಆಸ್ತಿ ಹಂಚುವ ಬಗ್ಗೆ ಗಂಭೀರವಾಗಿ ಯೋಚಿಸುವಿರಿ. ಸಂಸ್ಥೆಗಳಲ್ಲಿ ನಾಯಕರ ಆಯ್ಕೆ ಪ್ರಕ್ರಿಯೆ ಗುಪ್ತವಾಗಿ ನಡೆಯಲಿದೆ. ಯಾವುದೇ ಹೊಸ ವಿಚಾರವನ್ನು ಕೂಲಂಕಷವಾಗಿ ಪರೀಕ್ಷಿಸದೆ ಕುರುಡಾಗಿ ಒಪ್ಪಿಕೊಳ್ಳಬೇಡಿ. ಇಂದು ಶಿಸ್ತು ಮತ್ತು ನಿಯಮಗಳಿಗೆ ನೀವು ಹೆಚ್ಚಿನ ಆದ್ಯತೆ ನೀಡುವಿರಿ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j