ಕೊನೆಗೂ ಬಂದಿದೆ ಮಹಿಳೆಯರ ಧ್ವನಿಗೆ ಶಕ್ತಿ ನೀಡುವ ಸಮಯ
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಏ. 17
ತನ್ನ ಜನರನ್ನು ಪ್ರತಿನಿಧಿಸುವ ಪ್ರಜಾಪ್ರಭುತ್ವ ಭಾರತವು 670 ದಶಲಕ್ಷ ಮಹಿಳೆಯರಿಗೆ ನೆಲೆಯಾಗಿದೆ. ಆದರೆ ಸುದೀರ್ಘ ವರ್ಷಗಳಿಂದ, ನಮ್ಮ ಶಾಸಕರು ಆ ಜನಸಂಖ್ಯೆಯಲ್ಲಿ ಕೇವಲ ಶೇ.15ರಷ್ಟನ್ನು ಮಾತ್ರ ಪ್ರತಿನಿಧಿಸಿದ್ದಾರೆ. ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಿಂದ ತನ್ನ ಅರ್ಧದಷ್ಟು ನಾಗರಿಕರನ್ನು ನಿರಂತರವಾಗಿ ಹೊರಗಿಡುವ ಪ್ರಜಾಪ್ರಭುತ್ವವನ್ನು ನೈಜ ಪ್ರಜಾಪ್ರಭುತ್ವ ಎಂದು ಪರಿಗಣಿಸಲಾಗುವುದಿಲ್ಲ; ಅದು ಇನ್ನೂ ಆಗಬೇಕಿರುವ ಕೆಲಸವಾಗಿಯೇ ಉಳಿದಿದೆ. ‘ನಾರಿ ಶಕ್ತಿ ವಂದನ್ ಅಧಿನಿಯಮ’ವು ಈ ಪ್ರಯತ್ನವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ನಾರಿ ಶಕ್ತಿ ವಂದನ್ ಅಧಿನಿಯಮವನ್ನು ಈಗಾಗಲೇ ಅಂಗೀಕರಿಸಲಾಗಿದೆ.
ಸಂಸತ್ತು ಸೆಪ್ಟೆಂಬರ್ 2023ರಲ್ಲಿ ಈ ಬಗ್ಗೆ ಚರ್ಚಿಸಿದೆ; ಸಂವಿಧಾನ ತಿದ್ದುಪಡಿ ಮಾಡಲಾಗಿದೆ. ಆದರೆ ಈಗ ಅತ್ಯಂತ ಸವಾಲಿನ ಭಾಗ ನಮ್ಮ ಮುಂದಿದೆ ಅದೇ ಆ ಮಾತನ್ನು ಉಳಿಸಿಕೊಳ್ಳುವುದು. ಈ ದೃಶ್ಯವು ವೈಯಕ್ತಿಕ ಸಾಧನೆಯನ್ನು ಗುರುತಿಸುವುದಕ್ಕಿಂತಲೂ, ಸಾರ್ವಜನಿಕ ಕ್ಷೇತ್ರದಲ್ಲಿ ಮಹಿಳೆಯರು ಇನ್ನೂ ದೂರ ಕ್ರಮಿಸಬೇಕಾದ ಸ್ಪಷ್ಟ ಸೂಚನೆಯನ್ನು ಸೂಚಿಸುತ್ತಿದೆ. ಅಲ್ಲಿ ಮಹಿಳೆಯರು ಸದಾ ತಮ್ಮ ಸದೃಢತೆ ಮತ್ತು ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಆ ಶಕ್ತಿಯನ್ನು ಸಾರ್ವಜನಿಕ ಜೀವನಕ್ಕೆ ತರುವುದು ಕೆಲವೇ ಕೆಲವರು. ಈ ಮೊದಲು ನಡೆದ ಹಾದಿಯಲ್ಲಿ ನಡೆಯುವುದು ಮತ್ತು ಅದೇ ಉತ್ಸಾಹವನ್ನು ಹೊಂದಿದ್ದರೂ ಪ್ರತಿಯೊಬ್ಬರೂ ಅಂಥದ್ದೇ ಅವಕಾಶ ಪಡೆಯುವುದು ಎಷ್ಟು ಕಷ್ಟವೆಂಬುದು ನನಗೆ ತಿಳಿದಿದೆ ಎಂದಿದ್ದಾರೆ.
ಜನಗಣತಿ ನಡೆಯಬೇಕು, ಅದರ ಬಳಿಕ ಕ್ಷೇತ್ರ ಪುನರ್ವಿಂಗಡಣೆ ನಡೆಯಬೇಕು, ಮುಂದಿನ ಹಂತವಾಗಿ ಸಂಸತ್ತು ಮತ್ತು ಪ್ರತಿ ರಾಜ್ಯ ವಿಧಾನಸಭೆಯ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರು ಅಲಂಕರಿಸ ಲಿದ್ದಾರೆ. ಕಾನೂನುಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಮಹಿಳೆಯರನ್ನು ಸೇರಿಸಿಕೊಂಡಾಗ, ಶಾಸನದ ಕೇಂದ್ರ ಬಿಂದು ಬದಲಾಗುತ್ತದೆ. ದಶಕಗಳ ಹಿಂದೆ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಜಾರಿಗೆ ತಂದಿದ್ದ ಪಂಚಾಯತ್ರಾಜ್ ಸಂಸ್ಥೆಗಳು ಆದ್ಯತೆಗಳಲ್ಲಿ ಅಳೆಯಬಹುದಾದ ಬದಲಾವಣೆಯನ್ನು ತೋರಿಸುತ್ತವೆ. ಏಕತಾನತೆಯ ಚಕ್ರವನ್ನು ಭೇದಿಸುವತ್ತ ಮಹಿಳೆಯರು ತಮ್ಮದೇ ಆದ ಅರ್ಹತೆಯ ಮೇಲೆ ಮೇಲೇರಬೇಕು ಎಂಬ ವಾದವನ್ನು ನಾನು ಕೇಳಿದ್ದೇನೆ. ಆ ಭಾವನೆಯನ್ನು ನಾನು ಗೌರವಿಸುತ್ತೇನೆ, ಅವಕಾಶಗಳು ಇರುವಲ್ಲಿ ಮಾತ್ರ ಅದು ಪ್ರವರ್ಧಮಾನಕ್ಕೆ ಬರುತ್ತದೆ. ತಲೆಮಾರುಗಳಿಂದಲೂ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ರಚನಾತ್ಮಕ ಅಡೆತಡೆಗಳು ಪ್ರತಿಭಾವಂತ ಮಹಿಳೆಯರನ್ನು ರಾಜಕೀಯದಿಂದ ದೂರವಿರಿಸಿವೆ ಎಂದು ದೂರಿದರು.
ಮೀಸಲಾತಿಯು ಅರ್ಹತೆಯನ್ನು ಕಡಿಮೆ ಮಾಡುವುದಿಲ್ಲ, ಅದು ತಡೆಗೋಡೆಯನ್ನು ತೊಡೆದುಹಾಕುತ್ತದೆ. ಹೊಸ ನೀತಿಗೆ ಇದು ಯಾವ ಅರ್ಥ ನೀಡುತ್ತದೆ? ನಿರ್ಧಾರ ಕೈಗೊಳ್ಳುವ ಸಮಯದಲ್ಲಿ ಕೋಣೆಯಲ್ಲಿ ಯಾರು ಇದ್ದಾರೆ ಎಂಬುದು ಅಲ್ಲಿ ಏನು ಚರ್ಚೆ ನಡೆಸಲಾಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಸರ್ಕಾರದಲ್ಲಿ ನನ್ನ ವ್ಯಾಪಕ ಅನುಭವದಿಂದ ಈ ವಿಷಯವನ್ನು ಕಲಿಸಿದೆ. ಮಹಿಳಾ ಶಾಸಕರು ತಾಯಿಯ ಆರೋಗ್ಯ ನಿಧಿಯನ್ನು ಕಡಿತಗೊಳಿಸಿದಾಗ ಅದನ್ನು ಒತ್ತಾಯಿಸುತ್ತಾರೆ. ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ ಎಂದರೆ ಇದೇ ಮೊದಲ ಬಾರಿಗೆ ಈ ಧ್ವನಿಗಳಿಗೆ ಶಕ್ತಿ ಬರಲಿದೆ. ಅವು ರಚನಾತ್ಮಕವಾಗಿರುತ್ತವೆ. ಶಾಶ್ವತವಾಗುತ್ತವೆ, ಆ ದನಿಗಳನ್ನು ನಿರ್ಲಕ್ಷಿಸುವುದು ಅಸಾಧ್ಯ ಎಂದು ತಿಳಿಸಿದ್ದಾರೆ.
ನಾರೀಶಕ್ತಿ: ದೂರದೃಷ್ಟಿಯಿಂದ ಕಾನೂನಿನವರೆಗೆ ಮಹಿಳೆಯರ ಸಂಪೂರ್ಣ ಮತ್ತು ಸಮಾನ ಭಾಗವಹಿಸುವಿಕೆಯಿಲ್ಲದೆ ಭಾರತವು ತನ್ನ ಸಂಪೂರ್ಣ ಸಾಮಥ್ರ್ಯವನ್ನು ಅರಿತುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಬಹಳ ಹಿಂದಿನಿಂದಲೂ ಹೇಳುತ್ತಿದ್ದಾರೆ. ಇದು ಕೇವಲ ಮಾತಿನಲ್ಲಿ ಉಳಿದಿಲ್ಲ. ಬದಲಿಗೆ ಬೇಟಿ ಬಚಾವೋ ಬೇಟಿ ಪಡಾವೋದಿಂದ ಹಿಡಿದು ಜನ್ ಧನ್, ಉಜ್ವಲ ಮತ್ತು ಪಿಎಂ ಆವಾಸ್ ಯೋಜನೆಯಲ್ಲಿ ಮಹಿಳೆಯರನ್ನು ದಾಖಲೆಯ ಮಟ್ಟದಲ್ಲಿ ಸೇರ್ಪಡೆಗೊಳಿಸುವ ಮೂಲಕ ಪ್ರತಿ ನೀತಿಯನ್ನು ದೃಢ ನಿಶ್ಚಯದಿಂದ ಮುನ್ನಡೆಸಿದ್ದಾರೆ. ಪಕ್ಷಾತೀತವಾಗಿ ನನ್ನ ಸಹೋದ್ಯೋಗಿಗಳಿಗೆ ಇದು ನಮ್ಮೆಲ್ಲರಿಗೂ ಸೇರಿದ ಸಮಯ. ಯಾವುದೇ ಒಂದು ಪಕ್ಷಕ್ಕೆ ಸೀಮಿತವಾದುದಲ್ಲ, ಬದಲಿಗೆ ಒಂದು ಸಂಸ್ಥೆಯಾಗಿ ಇಡೀ ಸಂಸತ್ತಿಗೆ ಸಂಬಂಧಿಸಿದ್ದು.ಅನುಷ್ಠಾನ, ಮೀಸಲು ಸ್ಥಾನಗಳ ಆವರ್ತನ, ಬದಲಿ ಅಭ್ಯರ್ಥಿಗಳು, ಷರತ್ತುಗಳ ಬಗೆಗಿನ ಕಳವಳಗಳನ್ನು ನಾನು ಅರ್ಥಮಾಡಿ ಕೊಂಡಿದ್ದೇನೆ. ಇವು ಕಾನೂನುಬದ್ದ ಚರ್ಚೆಗಳಾಗಿವೆ, ಆದರೆ ಈ ವಿಷಯದ ಬಗ್ಗೆ ತರ್ತು ಗಮನ ಹರಿಸುವುದು ಅಗತ್ಯ ಎಂದು ನಾವು ಖಚಿತಪಡಿಸಿಕೊಳ್ಳಬೇಕು ಎಂದರು.
ತತ್ವವು ಸದೃಢವಾಗಿದೆ. ಅವಶ್ಯಕತೆ ತುರ್ತಾಗಿದೆ. ಪರಿಪೂರ್ಣರನ್ನು ಪರಿವರ್ತನೆಯ ಶತ್ರುವಾಗಲು ನಾವು ಅನುವು ನೀಡಬಾರದು. ನ್ಯಾಯ ಸಮ್ಮತತೆಯನ್ನು ಆಯ್ಕೆ ಮಾಡಿದ ರಾಷ್ಟ್ರ ಸೆಪ್ಟೆಂಬರ್ 2023ರಲ್ಲಿ ಇತಿಹಾಸ ನಿರ್ಮಿಸ ಲಾಯಿತು. ಆದರೆ ಅದರ ನಂತರ ನಡೆಯಬೇಕಾದ ಪ್ರಕ್ರಿಯೆ ನಡೆದರಷ್ಟೇ ಇತಿಹಾಸ ಅರ್ಥಪೂರ್ಣವಾಗಲಿದೆ. ನ್ಯಾಯಸಮ್ಮತ ತೆಯನ್ನು ಆಯ್ಕೆ ಮಾಡುವ ದೇಶವು ತಾನು ಅಂಗೀಕರಿಸುವ ಕಾನೂನುಗಳ ಪ್ರಕಾರ ಬದುಕುವ ಮೂಲಕ ಸದ್ದಿಲ್ಲದೆ ಶಾಶ್ವತ ಕೆಲಸವನ್ನು ಮಾಡುತ್ತದೆ. ತನ್ನ ದೇಶಕ್ಕೆ ಸೇವೆ ಸಲ್ಲಿಸಲು ಬಯಸುವ ಯಾವುದೇ ಸಮುದಾಯದ ಮಹಿಳೆಗೆ, ಎಂದಿಗೂ ವೇದಿಕೆ ಏರದ ನಾಯಕಿಗೆ ಮತ್ತು ಎಂದಿಗೂ ಮೈಕ್ರೋಫೋನ್ ದೊರೆಯದ ಧ್ವನಿಗಾಗಿ, ನಾವು ಕಾರ್ಯಪ್ರವೃತ್ತರಾಗುವ ಸಮಯ ಈಗ ಬಂದಿದೆ. ಈ ಕಾನೂನನ್ನು ಜಾರಿಗೆ ತರಬೇಕಿದೆ. ಕೋಣೆಯನ್ನು ಮತ್ತಷ್ಟು ದೊಡ್ಡದಾಗಿ ಮಾಡಬೇಕಿದೆ ಎಂದು ತಿಳಿಸಿದರು.
ಲೇಖನ : ಶ್ರೀಮತಿ ರೇಖಾ,
ಜಿಲ್ಲಾ ಕಾರ್ಯದರ್ಶಿ,
ಭಾರತೀಯ ಜನತಾ ಪಾರ್ಟಿ,


