ಲಿವರ್‌ ದಾನ ಮಾಡಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಮಹಿಳೆ..!

ಮೃತರನ್ನು ಅರ್ಚನಾ ಕಾಮತ್‌ (34) ಎಂದು ಗುರುತಿಸಲಾಗಿದೆ. ಇವರು ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ಸಂಬಂಧಿಕರೊಬ್ಬರಿಗೆ ಯಕೃತ್ತಿನ ಕಸಿಗೆ ತನ್ನ ಯಕೃತ್ತನ್ನು ದಾನ ಮಾಡಿದ್ದರು. ಈ ಚಿಕಿತ್ಸೆಗೆಂದು ಮಂಗಳೂರಿಗೆ ಆಸ್ಪತ್ರೆಗೆ ಅರ್ಚನಾ ದಾಖಲಾಗಿದ್ದರು.

ವಿಪರ್ಯಾಸ ಅಂದ್ರೆ ಚಿಕಿತ್ಸೆ ವೇಳೆ ಅರ್ಚನಾ ಸೋಂಕಿಗೆ ತುತ್ತಾಗಿದ್ದಾರೆ. ಹೀಗಾಗಿ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ. ಅಲ್ಲದೇ ಅರ್ಚನಾ ಸಂಬಂಧಿಕರು, ಆತ್ಮೀಯರಿಗೂ ಶಾಕ್‌ ಆಗಿದ್ದು, ಕಂಬನಿ ಮಿಡಿದಿದ್ದಾರೆ. ಮೃತರು ಪತಿ, 4 ವರ್ಷದ ಮಗು ಹಾಗೂ ತಂದೆ-ತಾಯಿಯನ್ನು ಅಗಲಿದ್ದಾರೆ. ಸದಾ ಸಮಾಜಮುಖಿ ಚಿಂತನೆಯೊಂದಿಗೆ ಅರ್ಚನಾ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.

Source : https://m.dailyhunt.in/news/india/kannada/navasamaja-epaper-nvsamaja/mangaluru+livar+daana+maadalu+hogi+tanna+praanavanne+kaledukonda+mahile+-newsid-n631171879?listname=topicsList&index=4&topicIndex=0&mode=pwa&action=click

Leave a Reply

Your email address will not be published. Required fields are marked *