ಮೋದಿ ಸರ್ಕಾರದ ಸಾಧನೆಗಳ ಪ್ರಸ್ತಾಪ; ರಾಜ್ಯ ಸರ್ಕಾರದ ಬರ ನಿರ್ವಹಣೆ ಕುರಿತು ಗೋವಿಂದ ಕಾರಜೋಳ ಟೀಕೆ.

ಚಿತ್ರದುರ್ಗ ಸೆ. 18

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಪ್ರಧಾನಿ ನರೇಂದ್ರ ಮೋದಿ ಅಂದರೆ ಸ್ಥಿರತೆ, ಭದ್ರತೆ, ಸಾಧನೆ ಮುಂದಿಟ್ಟು ಮತ ಕೇಳಿದವರು ಪ್ರಧಾನಿ ಮೋದಿಯವರು.ಪ್ರಪಂಚದ ಎಲ್ಲ ದೇಶಗಳ ಜತೆ ಉತ್ತಮ ಬಾಂದವ್ಯ, ವ್ಯವಹಾರ, ನೆರೆ ಹೊರೆ ರಾಷ್ಟ್ರಗಳಿಗೆ ನೆರವು ನೀಡಿದವರು ಮೋದಿಯವರು. 25 ವರ್ಷ ಯಾವುದೇ ಕಳಂಕ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಎಂದು ಮಾಜಿ ಉಪ ಮುಖ್ಯಮಂತ್ರಿ ಸಂಸದರಾದ ಗೋವಿಂದ ಕಾರಜೋಳ ತಿಳಿಸಿದರು.

ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಅವರ 25 ವರ್ಷಗಳ ಜನಸೇವೆಗೆ ಗೌರವಿಸುವ ಸಲುವಾಗಿ ಹಮ್ಮಿಕೊಂಡಿರುವ ಸೇವಾ ಕಾರ್ಯದ ಕುರಿತು ಹಾಗೂ ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ವಿಫಲ ಆಗಿರುವ ಕುರಿತು ಪತ್ರಿಕಾಗೋಷ್ಠಿ ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿಯವರು ಈ ದೇಶದ ಭರವಸೆ.ಸೆ.17ರಿಂದ ಅ.17ರವರೆಗೆ ವಿಶಿಷ್ಟ ಕಾರ್ಯ ಕ್ರಮ ಆಯೋಜನೆ ಮಾಡಿದ್ದೇವೆ. ನರೇಂದ್ರ ಮೋದಿ ಕಾಲದಲ್ಲಿ ಸಾಮಾಜಿಕ ಕಲ್ಯಾಣ, ಗರೀಬ್ ಕಲ್ಯಾಣ, ಅಕ್ಕಿ ವಿತರಣೆ, ಉಜ್ವಲ, ಪಿಎಂ ಸ್ವನಿಧಿ, ವಿಶ್ವಕರ್ಮ ಯೋಜನೆ ಉಜ್ವಲ ಯೋಜನೆ ನೈಸರ್ಗಿಕ ಸಂಪತ್ತಿಗೆ ಕೊಡುಗೆ ನೀಡಿದ್ದಾರೆ.14ಕೋಟಿ ಶೌಚಾಲಯ ನಿರ್ಮಾಣ ಸ್ವಚ್ಛ ಭಾರತದ ಸಾಧನೆ… ಜನ ಔಷಧಿ ಮೂಲಕ ಶೇ.90ಎಷ್ಟು ಕಡಿಮೆ ದರದಲ್ಲಿ ಔಷಧಿ ದೊರೆಯುವಂತೆ ಮಾಡಿದ್ದಾರೆ.ನರೇಂದ್ರ ಮೋದಿಯವರ ಕಾಲದಲ್ಲಿ ದೇಶದ ಆರ್ಥಿಕ ಕ್ರಾಂತಿಯಾಗಿದೆ… ಮೋದಿ ಪ್ರಧಾನಿ ಆಗುವ ಮುನ್ನ ರಾಷ್ಟ್ರ ಆರ್ಥಿಕತೆಯಲ್ಲಿ 14ನೇ ಸ್ಥಾನದಲ್ಲಿದ್ದೆವು.ಈಗ ಭಾರತ 4ನೇ ಸ್ಥಾನ ತಲುಪಿದ್ದು 3ನೇ ಸ್ಥಾನಕ್ಕೆ ದಾಪುಗಾಲು ಇಡುತ್ತಿದ್ದೇವೆ…ಈ ಹಿಂದೆ ಭಾರತ ಸಾಲ ಕೇಳಲು ಬರುತ್ತದೆಂಬ ಭಾವನೆ ವಿದೇಶಗಳಲ್ಲಿತ್ತು.ಈಗ ರತ್ನಗಂಬಳಿ ಹಾಸಿ ಮೋದಿಗೆ ಆಹ್ವಾನಿಸುತ್ತಿದ್ದಾರೆ ಎಂದರು.

ಮೋದಿ ಸರ್ಕಾರ ತಂತ್ರಜ್ಞಾನಕ್ಕೆ ಹೆಚ್ಚು ಆದ್ಯತೆ ನೀಡಿದೆ.ನೋಟ್ ಅಮಾನ್ಯದಿಂದ ನಕಲಿ ನೋಟ್ ಹಾವಳಿಗೆ ಬ್ರೇಕ್ ಬಿದ್ದಿದೆ.ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ದಾರೆ… ರಾಜ್ಯದಲ್ಲಿ ಬೊಮ್ಮಾಯಿ ಕಾಲದಲ್ಲಿ ಶಿಕ್ಷಣ ನೀತಿ ಜಾರಿಯಲ್ಲಿತ್ತು.ಸಿದ್ಧರಾಮಯ್ಯ ಕಾಲದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗೆ ಬ್ರೇಕ್ ಬಿದ್ದಿದೆ..ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸದ ಹಿನ್ನೆಲೆ ತ್ರಿಶಂಕು ಸ್ಥಿತಿಯಲ್ಲಿದೆ. ರಾಜ್ಯ ಸರ್ಕಾರಕ್ಕೆ ದೂರದೃಷ್ಟಿ ಇಲ್ಲದ ಕಾರಣ ವಿದ್ಯುತ್ ಅಭಾವ ಉಂಟಾಗಿದೆ.. ಚಿತ್ರದುರ್ಗ ಜಿಲ್ಲೆಯಲ್ಲಿ 20ಲಕ್ಷ ಜಾನುವಾರುಗಳಿವೆ. ಗೋಶಾಲೆ, ಮೇವು ಬ್ಯಾಂಕ್ ತೆರೆಯಲು ನಾನು ಒತ್ತಾಯಿಸಿದ್ದೇನೆ ಎಂದ ಅವರುಮೇವು, ನೀರಿನ ವ್ಯವಸ್ಥೆ ಮಾಡಲು ಒತ್ತಾಯಿಸಿದ್ದೇನೆ. ಕಾಟಾಚಾರಕ್ಕೆ ಬರ ಘೋಷಣೆ ಮಾಡಿದ್ದಾರೆ..ಒಂದೇ ಒಂದು ರೂಪಾಯಿ ಪರಿಹಾರಕ್ಕೆ ಕ್ರಮ ಕೈಗೊಂಡಿಲ್ಲ.. ಗೋಶಾಲೆ ನಡೆಸುವ ಮಠಮಾನ್ಯಗಳಿಗೆ ಸಹಾಯ ಮಾಡಬೇಕು. ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಹಿರಿಯೂರು ವ್ಯಾಪ್ತಿಯಲ್ಲಿ ಹನಿ ನೀರಿಗೂ ಪರದಾಡುವ ಸ್ಥಿತಿಯಿದೆ… ಉಪಚುನಾವಣೆ ಕಾರಣಕ್ಕೆ ಕೆಲವರು ಗಿಮಿಕ್ ಮಾಡುತ್ತಿದ್ದಾರೆ.ವಿಬಿ ಜಿ ರಾಮ್ ಜಿ ಯೋಜನೆಯಡಿ ಪರಿಹಾರ ಕ್ರಮ ಕೈಗೊಳ್ಳಬಹುದು.ಬೆಳೆ ವಿಮೆ ನೀಡಬೇಕು, ಬೆಳೆ ನಷ್ಟವಾದ ರೈತರ ಸಾಲಮನ್ನಾ ಮಾಡಬೇಕು.ಸಿಎಂ ಡಿಕೆಶಿ ನೂರು ದಿನಗಳ ಸಾಧನೆ ಸಮಾವೇಶ ಮಾಡಿದರು.. ಕೇವಲ ಬಿಳಿ ಕಾಗದದ ಮೇಲೆ ಸಹಿ ಮಾಡಿದರೆ ಸಾಧನೆ ಅಲ್ಲ… ಮುಖ್ಯಮಂತ್ರಿ ಮಾತು ಕಡಿಮೆ ಮಾಡಿ ಕೆಲಸ ಮಾಡಲಿ.ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್,ಸರ್ಕಾರದ ನೂರು ದಿನದ ಸಾಧನೆ ಶೂನ್ಯ. ಮಾತಿನಲ್ಲಿ ಮಂಟಪ ಕಟ್ಟಿ ಮನೆಗೆ ಹೋಗೋದು ಅಲ್ಲ.ರಾಜ್ಯದಲ್ಲಿ ರೇಪ್, ಮರ್ಡರ್ ಪ್ರಕರಣಗಳು ಹೆಚ್ಚಿವೆ… ಕಾನೂನು ಸುವ್ಯವಸ್ಥೆ ಜವಾಬ್ದಾರಿ ಇರೋರಿಗೆ ಸಿಎಂ ಕಿವಿಹಿಂಡಿ ಹೇಳಬೇಕು ಎಂದು ಒತ್ತಾಯಿಸಿದರು.

ಯುಪಿಐ ಟ್ಯಾಕ್ಸ್ ನಿಂದ ಗ್ರಾಹಕರ ಮೇಲೆ ಹೊರೆ ಆಗಲ್ಲ. ಒಂದು ರಾಷ್ಟ್ರ ಒಂದು ತೆರಿಗೆ ಬಂದಾಗಲೂ ಹೀಗೆ ಹೇಳುತ್ತಿದ್ದರು.. ಆದರೆ ಯಾವುದೇ ತೊಂದರೆ ಆಗಲ್ಲ… ಜನರಿಗೆ ಸಮಸ್ಯೆ ಆದರೆ ಬದಲಿಸುವುದಕ್ಕೆ ಸರ್ಕಾರಕ್ಕೆ ಅಧಿಕಾರವಿದೆ.ರಾಹುಲ್ ಗಾಂಧಿ ಹತಾಶರಾಗಿ ಟೀಕೆ ಮಾಡುತ್ತಾರೆ. ಕೆಲವರು ಹೊರದೇಶದಲ್ಲಿ ಹಣ ಡೆಪಾಸಿಟ್, ಹೂಡಿಕೆ ಮಾಡಿದ್ದಾರೆ… ಆ ಹಣ ತಂದರೆ ಪ್ರತಿ ಅಕೌಂಟಿಗೆ 15ಲಕ್ಷ ಹಣ ಬರುತ್ತದೆ ಎಂದಿದ್ದರು. ಕೋಟಾನೋಟು ತಡೆಗೆ ನೋಟು ಅಮಾನ್ಯ ಮಾಡಲಾಗಿತ್ತು.ಕೊವಿಡ್ ಲಸಿಕೆ ಬಗ್ಗೆ ದುಷ್ಪರಿಣಾಮ ಬಗ್ಗೆ ಸಂಶೋಧನೆ ಆಗಬೇಕಾಗುತ್ತದೆ.. ರಾಹುಲ್ ಗಾಂಧಿ ಹೇಳಿದಂತೆ ಹೇಳಲು ಆಗಲ್ಲ.ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಹೇಳಿದೆ..ಚೀನಾದಂತಹ ರಾಷ್ಟ್ರದಲ್ಲಿ ರಾಶಿ ರಾಶಿ ಹೆಣದ ರಾಶಿ ಬಿದ್ದಿತ್ತಲ್ಲವೇ ಎಂದರು.

ಭದ್ರಾ ಮೇಲ್ದಂಡೆ ಯೋಜನೆಗೆ 5.300ಕೋಟಿ ಘೋಷಿಸಿದ್ದು ನಿಜ…ಕೇಂದ್ರ ಸರ್ಕಾರ ಬಜೆಟ್ ನಲ್ಲೇ ಹಣ ಘೋಷಿಸಿದೆ…ಆದರೆ ಕೇಂದ್ರ ಸರ್ಕಾರದ ಕಂಡಿಷನ್ಸ್ ರಾಜ್ಯ ಸರ್ಕಾರ ಪೂರ್ಣಗೊಳಿಸಿಲ್ಲ.ರಾಷ್ಟ್ರೀಯ ಯೋಜನೆ ಎಂಬುದಾಗಿ ಘೋಷಿಸಿದರೆ ಕೇಂದ್ರಕ್ಕೆ ಹೊರೆಯಾಗಲಿದೆ..ವಿವಿಧ ರಾಜ್ಯಗಳಲ್ಲಿ ಅನೇಕ ಯೋಜನೆಗಳಿವೆ, ಎಲ್ಲವೂ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದರೆ ಹೊರೆ.ಕೇಂದ್ರ ಘೋಷಿತ 5300 ಕೋಟಿ ರೂ ತರುವ ಪ್ರಯತ್ನದಲ್ಲಿದ್ದೇನೆ.ರಾಜ್ಯ ಸರ್ಕಾರದ ಯೋಜನೆ ಪ್ರಾಮಾಣಿಕವಾಗಿ ಮಾಡಬೇಕು… ಕೇಂದ್ರದ ಬಜೆಟ್‍ನಲ್ಲಿ ಘೋಷಿತ ಹಣ ಕ್ಯಾರಿ ಓವರ್ ಆಗುತ್ತದೆ..ಮೋದಿ ಅವರು ಮಾತು ಕೊಟ್ಟಿದ್ದಾರೆ ಕೊಡುತ್ತಾರೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

ಗೋಷ್ಟಿಯಲ್ಲಿ ಮಾಜಿ ಶಾಸಕರುಗಳಾದ ಜಿ.ಎಚ್.ತಿಪ್ಪಾರೆಡ್ಡಿ ಎಸ್.ಕೆ.ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಾಧುರಿ ಗೀರಿಶ್, ವಕ್ತಾರ ನಾಗರಾಜ್ ಬೇದ್ರೇ, ಸಹ ವಕ್ತಾರ ನವೀನ ಚಾಲುಕ್ಯ, ಉಪಾಧ್ಯಕ್ಷ ಡಾ,ಸಿದ್ಧಾರ್ಥ ಗುಂಡಾರ್ಪಿ ಬಸಮ್ಮ ಸಂಪತ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *