ಚಿತ್ರದುರ್ಗ ಮೇ. 31
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಜಿಲ್ಲಾ ಕುರುಬ ಸಂಘದವರು ಇಂದು ನಡೆಸಿದ ಪ್ರತಿಕಾಗೋಷ್ಠಿ ಯಾವ ಪುರುಷರ್ಥಕ್ಕೆ ಅಥವಾ ಯಾವ ನೈತಿಕತೆಯಿಂದ ಕರೆದಿದ್ದರೆ ಗೊತ್ತಿಲ್ಲ ಎಂದು ಜಿಲ್ಲಾ ಕುರುಬ ಸಂಘದ ಮಾಜಿ ಅಧ್ಯಕ್ಷರು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ನಿರ್ದೇಶಕರು ಹಾಗೂ ಚಿತ್ರದುರ್ಗ ಟೌನ್ ಕೋ ಆಪರೇಟಿವ್ ಸೊಸೈಟಿ ಲಿ. ಅಧ್ಯಕ್ಷರಾದ ಒ. ನಿಶಾನಿ ಜಯಣ್ಣ ಟೀಕಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಈಗ ಸಿದ್ದರಾಮಯ್ಯ ರವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಪ್ರತಿಕ್ರಯೆ ನೀಡುವ ಜಿಲ್ಲಾ ಕುರುಬರ ಸಂಘದವರು ಜನತಾದಳ ಪಕ್ಷದಿಂದ ಸಿದ್ದರಾಮಯ್ಯನವರನ್ನು ಉಚ್ಛಟಿಸಿದಾಗ ಕಾಂಗ್ರೇಸ್ನ ಅದಿನಾಯಕಿ ಶ್ರೀಮತಿ ಸೋನಿಯಾ ಗಾಂಧಿಯವರ ಸಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿ ಸುದೀರ್ಘ 17 ವರ್ಷ್ ಅ.ಐ.P ಲೀಡರ್ ಆಗಿ, 2 ಬಾರಿ ವಿರೋಧ ಪಕ್ಷದ ನಾಯಕರಾಗಿ, ದಾಖಲೆ 8 ವರ್ಷ ಮುಖ್ಯಮಂತ್ರಿ ಆಗಿ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದರೆ ಎಂದರು.
ಕೆಲವು ಜನ ನಾವೇ ಕುರುಬ ಸಂಘದ ಪದಾಧಿಕಾರಿಗಳು ಎಂದು ಹೇಳಿಕೊಂಡು ಸುದ್ದಿ ಗೋಷ್ಠಿ ಕರೆದಿದ್ದರೆ ಆದರೆ ಪದಾಧಿಕಾರಿಗಳನ್ನು ಯಾರು ಆಯ್ಕೆ ಮಾಡಿದರೆ ಎಂಬುದೇ ಯಕ್ಷ ಪ್ರಶ್ನೆ. 4 ಮಂದಿ ಸೇರಿಕೊಂಡು ನಾನೆ ಅಧ್ಯಕ್ಷ ನಾನೆ ಕಾರ್ಯದರ್ಶಿ ನಾನೆ ಖಜಾಂಜಿ ಎಂದು ತಮಗೆ ತಾವೇ ಘೋಷಿಸಿಕೊಂಡಿದ್ದಾರೆ. ಇದುವರೆಗೂ ಯಾವ ಚುನಾವಣೆ ನೆಡೆಸಿಲ್ಲ, ಸಮಾಜದವರು ಮುಂದೇನು ಆಯ್ಕೆ ಆಗಿಲ್ಲ. ಇಂಥ ಸಮಯದಲ್ಲಿ ಸುದ್ದಿ ಗೋಷ್ಠಿ ಮಾಡುತಿರುವುದು ನಿಮ್ಮಗಳ ಪ್ರಚಾರಕ್ಕೆ ಎಂಬುದು ಮೇಲ್ನೋಟ್ಟಕ್ಕೆ ಕಾಣಿಸುತ್ತದೆ ಎಲ್ಲಾ ಮುಗಿದಮೇಲೆ ಇವಾಗ ಇವರಿಗೆ ಜ್ಞಾನೋದಯವಾಗಿದೆ ನಮ್ಮ ಸಮಾಜದವರಿಗೆ. ಇವಾಗ ಪತ್ರಿಕಾ ಗೋಷ್ಠಿ ಮಾಡುವುದರಲ್ಲಿ ಯಾವುದೇ ಅರ್ಥ ಇರುವುದಿಲ್ಲ ಎಂದು ಒ. ನಿಶಾನಿ ಜಯಣ್ಣ ವ್ಯಂಗವಾಡಿದ್ದಾರೆ.