ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಕೃಷ್ಣ ಪಕ್ಷದ ನವಮೀ ತಿಥಿ, ಬುಧವಾರ ವೈರಿಗಳಿಂದ ಅನನಕೂಲತೆ, ಹಿರಿಯರ ಮೇಲೆ ಸೌಮ್ಯತೆ, ಪಾಂಡಿತ್ಯದಲ್ಲಿ ಅಗಾಧತೆ ಈ ದಿನ ಕಾಣಿಸುವುದು. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ವೃಷಭ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಮಂಗಳವಾರ, ತಿಥಿ: ನವಮೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ವೈಧೃತಿ ಕರಣ: ತೈತಿಲ, ಸೂರ್ಯೋದಯ – 06 : 04 am, ಸೂರ್ಯಾಸ್ತ – 06: 53 pm, ಇಂದಿನ ಶುಭಾಶುಭಕಾಲ: ರಾಹು ಕಾಲ 12:29 – 14:05, ಯಮಘಂಡ ಕಾಲ 07:41 – 09:17, ಗುಳಿಕ ಕಾಲ 10:53 – 12:29
ಮೇಷ ರಾಶಿ: ಏನೇ ಮಾಡಿದರೂ ಅನುಕೂಲತೆಯನ್ನು ಎಲ್ಲ ಕಡೆಯಿಂದ ನೋಡಿದರೂ ಕೊನೆಗೆ ಪ್ರತಿಕೂಲದಲ್ಲಿ ಸಿಕ್ಕಿಬೀಳುವಿರಿ. ಇಂದು ನಿಮ್ಮ ಪ್ರೇಮಜೀವನವು ಹಿಂದಿಗಿಂತಲೂ ಭಿನ್ನವಾಗಿ ತೋರುವುದು. ನಿಮ್ಮ ಸಂಗಾತಿಯು ನಿಮ್ಮ ಬಗ್ಗೆ ಉತ್ತಮ ಮನೋಭಾವವನ್ನು ಹೊಂದಿರುವ ಸಾಧ್ಯತೆ ಇದೆ. ನಿಮ್ಮವರು ನಿಮಗೆ ಕೆಲವು ಕಿವಿಮಾತನ್ನು ಹೇಳಬಹುದು. ದುರ್ಬಲತೆಯ ಸಮಯದಲ್ಲೂ ಧೈರ್ಯವಿರಲಿ. ಇಂದು ಕಾರ್ಯಕ್ಷಮತೆ ಹೆಚ್ಚಾಗುವ ಸಾಧ್ಯತೆ ಇದೆ. ಹಣಕಾಸಿನಲ್ಲಿ ಜವಾಬ್ದಾರಿಯುತ ಕ್ರಮ ತೆಗೆದುಕೊಳ್ಳಿ. ಯಾವುದೇ ಆಕಸ್ಮಿಕ ಘಟನೆಗಳಿಗೆ ಹೆದರುವ ಅವಶ್ಯಕತೆಯಿಲ್ಲ. ಅದಕ್ಕಾಗಿ ಸಮಯವನ್ನೂ ವ್ಯರ್ಥ ಮಾಡುವುದು ಬೇಡ. ಸಮಯದ ಹೊಂದಾಣಿಕೆ ಅವಶ್ಯಕ. ಇಂದು ಸಂಗಾತಿಯು ನಿಮ್ಮ ಸಂತೋಷವನ್ನು ಹೆಚ್ಚಿಸಬಹುದು. ಅಚ್ಚರಿ ಉಡುಗೊರೆಯೊಂದು ಸಿಗುವ ಸಾಧ್ಯತೆ ಇದೆ. ವಾಹನದಲ್ಲಿ ಸಂಚಾರಕ್ಕೆ ತೊಂದರೆ ಬರಬಹುದು.
ವೃಷಭ ರಾಶಿ: ಹಣ ಖರ್ಚಾಗುವುದೆಂಬ ಭಯದಿಂದ ಎಲ್ಲಿಗೂ ಹೋಗಲಾರಿರಿ. ಈ ದಿನ ನೀವು ಸಕಾರಾತ್ಮಕವಾಗಿ ಇರಬೇಕು ಎಂದುಕೊಂಡರೂ ಆಗದು. ನೂತನ ಗೃಹದ ಹುಡುಕಾಟ ಮಾಡಲಿದ್ದೀರಿ. ಹೊಸ ಮನೆಯ ಖರೀದಿಯೇ ನಿಮಗೆ ಉತ್ತಮ ಎನಿಸಬಹುದು. ಆಂತರಿಕ ಆಳದ ಬಲ ನಿಮ್ಮನ್ನು ಪ್ರಭಾವಶಾಲಿಯಾಗಿ ಉಳಿಸುತ್ತದೆ. ನಿಮ್ಮ ಮಾತಿಗೆ ಅಪರಿಚಿತರ ಬೆಂಬಲವೂ ಸಿಗಲಿದೆ. ಉದ್ಯೋಗದಲ್ಲಿ ಸೃಜನಶೀಲತೆಗೆ ಸ್ಪಷ್ಟತೆ ತರಲು ಇಂದಿನ ದಿನ ಪೂರಕವಾಗಿದೆ. ಆರೋಗ್ಯದಲ್ಲಿ ತಲೆನೋವು, ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಇರುತ್ತವೆ. ಸ್ನೇಹಿತರ ಸಹಾಯಕ್ಕೆ ಬರುವ ಸಮಯ ಇದಾಗಿದೆ. ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಸಿದ್ಧಿಸಿದ ಗುಣವಾಗಿದೆ. ಆಲಸ್ಯವು ಸ್ವಲ್ಪವಿದ್ದರೂ ನಿಮ್ಮ ಇಂದಿನ ಕಾರ್ಯಗಳು ನಿಮ್ಮನ್ನು ಚುರುಕಾಗಿಸುತ್ತವೆ. ಯಾವುದನ್ನೂ ಕೃತಕವಾಗಿ ತೋರಿಸಲು ಹೋಗುವುದು ಬೇಡ. ಸಹಜತೆಯು ನಿಮ್ಮ ಸ್ವಭಾವವಾಗಿರಲಿ. ಸಂಗಾತಿಯ ಸ್ವಭಾವವನ್ನು ಸುಲಭದಿಂದ ತಿಳಿಯಲು ಸಾಧ್ಯವಾಗದು. ಅತಿಯಾದ ಬಂಧವೂ ನಿಮಗೆ ಕಿರಿಕಿರಿ.
ಮಿಥುನ ರಾಶಿ: ನಿಮ್ಮ ಸೌಮ್ಯ ಗುಣವು ಹಲವರಿಗೆ ಇಷ್ಟವಾಗಲಿದೆ. ಇಂದು ನಿಮ್ಮ ಸಂಗಾತಿಯಿಂದ ಯಾವುದೇ ಸ್ಪಂದನೆಯು ಯಾವ ವಿಚಾರಕ್ಕೂ ಸಿಗದು. ನಿಮ್ಮನ್ನು ತಾತ್ಸಾರ ಮಾಡುತ್ತಿದ್ದಾರೆ ಎಂಬ ಭಾವನೆ ಮೂಡುವ ಸಾಧ್ಯತೆ ಇದೆ. ಹವ್ಯಾಸಗಳಲ್ಲಿ ಸಮಾನತೆ ಹೊಂದಿದರೆ ಪ್ರೀತಿ ಬೆಳೆದುಹೋಗುತ್ತದೆ. ಕೃಷಿಯ ಕೆಲಸದಲ್ಲಿ ಅನುಭವಿಗಳನ್ನು ಜೋಡಿಸಿಕೊಳ್ಳಿ. ಪ್ರಯಾಣ ನಿಮಗೆ ಆಧ್ಯಾತ್ಮಿಕ ಮತ್ತು ಮನರಂಜನೆಯ ಅನುಭವ ನೀಡುತ್ತದೆ. ಇನ್ನೊಬ್ಬರಿಗೆ ಕೊಡುವ ಸಮಯವಿದ್ದರೆ ಒಪ್ಪಿಕೊಳ್ಳಿ. ಬರವಣಿಗೆಯಲ್ಲಿ ತೊಡಗಿದರೆ ಹೆಚ್ಚು ಸ್ಫೂರ್ತಿ, ಹಣಕಾಸಿನಲ್ಲಿ ಸ್ವಲ್ಪ ಸುಧಾರಣೆ ಕಾಣಬಹುದು. ಕೆಲಸದ ವಿಷಯದಲ್ಲಿ ನೀವು ಬಹಳ ಚುರುಕಾಗಿ ಇರಲಿದ್ದೀರಿ. ನಿಮ್ಮ ಜೊತೆ ಸಂವಹನವನ್ನು ಮಾಡುವವರಿಗೆ ಖುಷಿ ಸಿಗಲಿದೆ. ಸಮಯ ವ್ಯಾಪಾರಿಗಳಿಗೆ ಅನುಕೂಲಕರವಾಗಿಲ್ಲ. ಇಂದು ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಮಕ್ಕಳ ಮೇಲೆ ಪ್ರೀತಿ ಅಧಿಕವಾಗುವುದು. ಯಾರಾದರೂ ನಿಮಗೆ ಬೇಡದ ಸಲಹೆಯನ್ನು ಕೊಡಬಹುದು.
ಕರ್ಕಾಟಕ ರಾಶಿ: ಎಲ್ಲದರಲ್ಲಿಯೂ ಉತ್ತಮನೆನೆಸಿಕೊಳ್ಳಲಾಗದು. ಅಂತಹ ಯೋಚನೆಯಿಂದ ಹೊರಬರುವುದು ಉತ್ತಮ. ನೀವು ಕುಟುಂಬದವರ ಪ್ರೀತಿಯನ್ನು ಬಹಳ ಕಾಲದ ಅನಂತರ ಅನುಭವಿಸುವಿರಿ. ಮಾಡಲು ಕೆಲಸಗಳಿದ್ದರೂ ಮಾಡದೇ ಸಮಯವನ್ನು ಹಾಳುಮಾಡುವಿರಿ. ನೈಜತೆಯನ್ನು ಮರೆಯಬೇಡಿ. ಕಲ್ಪನೆ ಮತ್ತು ಭಾವನೆಗಳು ಜತೆಯಾಗಿ ಕೆಲಸ ಮಾಡಲಿ. ಉದ್ಯೋಗದಲ್ಲಿ ನೂತನ ಕಲಿಕೆಗಳು ಸಿಗುತ್ತವೆ. ಆರೋಗ್ಯದಲ್ಲಿ ನೀರಿನ ಸೇವನೆ ಹೆಚ್ಚಿಸಬೇಕು. ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವ ಅಥವಾ ಧಾರ್ಮಿಕ ಕ್ಷೇತ್ರಗಳಿಗೆ ಹೋಗಿವ ಯೋಚನೆ ಮಾಡುವಿರಿ. ಅನ್ಯೋನ್ಯತೆಯ ಬಗ್ಗೆ ಕಣ್ಣು ಬೀಳಬಹುದು. ಆರ್ಥಿಕತೆ ಒಂದೇ ರೀತಿಯಲ್ಲಿ ಇರಲಿದೆ. ನೀವು ದೀರ್ಘಕಾಲದವರೆಗೆ ಕೆಲಸದಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸಲಿಲ್ಲ, ಆದರೆ ಇಂದು ನೀವು ನಿಮ್ಮ ಅತ್ಯುತ್ತಮವಾದದನ್ನು ನೀಡುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸುತ್ತೀರಿ. ಹಳೆಯ ನೋವಿನ ಬಗ್ಗೆ ನಿಮಗೆ ಭಯವಿರುವುದು.
ಸಿಂಹ ರಾಶಿ: ನೀವು ಬಯಸಿದಂತಹದ್ದು ಸಿಗದೇ ಇದ್ದರೂ ಅಲ್ಪ ಲಾಭದಿಂದ ತೃಪ್ತಿ. ಇಂದು ನೀವು ಮಾನಸಿಕ ಮತ್ತು ದೈಹಿಕವಾಗಿ ಸಬಲರು. ಉಲ್ಲಾಸ ಮತ್ತು ಸಂತೋಷಗಳು ಎಂದಿಗಿಂತ ಹೆಚ್ಚು ಇರಲಿದೆ. ನಿಮಗಿಷ್ಟವಾದ ಸಮಾರಂಭಕ್ಕೆ ಭೇಟಿ ಕೊಡುವಿರಿ. ಆಪ್ತರನ್ನು ಭೇಟಿಯಾಗುವಿರಿ. ಅಧಿಕಾರವನ್ನು ಬಳಸಿಕೊಳ್ಳುವ ಆಲೋಚನೆ ಸರಿಯಾದುದಲ್ಲ. ಏಕಾಂಗಿಯಾಗಿ ಜೀವನವನ್ನೂ ನಿಭಾಯಿಸಬಹುದು ಎಂಬ ಬಲದ ಅರಿವು ಬರಲಿದೆ. ಕೆಲಸದ ಸಮಯದಲ್ಲಿ ಹೊಸ ಆಲೋಚನೆಗಳನ್ನು ಹಂಚಿಕೊಳ್ಳಿ. ಕಿಡ್ನಿ ಅಥವಾ ಮೂತ್ರಪಿಂಡದ ಸಂಬಂಧಿತ ಸಮಸ್ಯೆ ಎದುರಾಗಬಹುದು, ಎಚ್ಚರಿಕೆಯಿಂದಿರಿ. ಬರೆಯುವುದು ಒಳ್ಳೆಯ ಒತ್ತಡ ನಿವಾರಣೆ ಪರಿಹಾರವಾಗಿದೆ. ನಿಮ್ಮವರಿಂದ ಇಂದು ಯಾವುದನ್ನೂ ನಿರೀಕ್ಷಿಸದೇ ಇದ್ದರೂ ತಾನಾಗಿಯೇ ಬಂದು ಒದಗುವುದು. ತಪ್ಪು ಹಾದಿಗೆ ಯಾರಿಂದಲಾದರೂ ಪ್ರೇರಣೆ ಸಿಗಲಿದೆ. ನಿಮ್ಮ ವಿವೇಕವನ್ನು ಬಳಸಿ. ಇಂದು ನೀವು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಕನ್ಯಾ ರಾಶಿ: ಮನಸ್ಸು ನಕಾರಾತ್ಮಕವಾಗಿ ಇದ್ದಾಗ ನೀವು ಬಯಸುವ ಶಾಂತಿಯನ್ನು ಎಲ್ಲಿಯೂ ಪಡೆಯಲಾಗದು. ಯಾವದೇ ತಾಳ್ಮೆಯಿಂದ ಅವುಗಳನ್ನು ತಣ್ಣಗಾಗಿಸಿ. ಹೆಚ್ಚು ಮಾತನಾಡಿ ಇನ್ನೊಂದಕ್ಕೆ ನಾಂದಿ ಹಾಡಬೇಡಿ. ಭವಿಷ್ಯದ ಕುರಿತು ಅತಿಯಾದ ಚಿಂತನೆಯನ್ನು ಮಾಡಲಿದ್ದೀರಿ. ಸ್ಥಿತಿಗತಿಗಳ ಒತ್ತಡ ನಿಮ್ಮ ಮನಸ್ಸನ್ನು ಹಿಂಡಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ನಿರ್ಣಯಗಳು ಮುಂದಿನ ಪ್ರಗತಿಗೆ ಕಾರಣವಾಗಬಹುದು. ನಿಮಗೆ ಮಕ್ಕಳು ನೆಮ್ಮದಿ ಕೊಡುವರು ಎಂಬ ಸಮಾಧಾನ ಕಾಣಿಸುವುದು. ಸ್ನೇಹಿತರ ಸಲಹೆ ಇಂದು ನಿಮಗೆ ಪ್ರೇರಣೆದಾಯಕವಾಗಬಹುದು. ಎಲ್ಲದಕ್ಕೂ ಅಡ್ಡದಾರಿಯಲ್ಲೇ ಹೋಗಬೇಕು ಎಂಬ ತೀರ್ಮಾನ ಬೇಡ. ವಿಳಂಬವಾದರೂ ತೊಂದರೆ ಇಲ್ಲ. ಮಕ್ಕಳಲ್ಲಿ ಪಕ್ಷಪಾತದಿಂದ ಕಲಹವಾಗುವುದು. ನೌಕರರ ವಿಚಾರದಲ್ಲಿ ನಿಮ್ಮ ವರ್ತನೆಯು ಸರಿಯಾಗಿರಲಿ. ನಿಮ್ಮದೇ ಆದ ಚಿಂತನೆಯಿಂದ ಕಾರ್ಯವನ್ನು ಮಾಡುವಿರಿ. ನಿಮ್ಮ ಬೌದ್ಧಿಕ ಕಸರತ್ತನ್ನು ಪ್ರದರ್ಶಿಸುವಿರಿ.
ತುಲಾ ರಾಶಿ: ಬಹು ಆಯಾಸವನ್ನು ಮಾಡಿಕೊಳ್ಳಲು ಹೋಗಲಾರಿರಿ. ಅನ್ಯರ ಯಶಸ್ಸಿಗೆ ನೀವು ಅಸೂಯೆ ಪಡುವ ಅವಶ್ಯಕತೆ ಇಲ್ಲ. ನಿಮಗೆ ಅಪಮಾನ ಮಾಡಲು ಪಿತೂರಿಗಳೂ ಆಗಬಹುದು. ನೀವು ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನವಿಡಿ. ವೇತನವನ್ನು ಹೆಚ್ಚು ಮಾಡಿಕೊಳ್ಳಲು ನಿಮಗೆ ದಾರಿ ಕಾಣಲಿದೆ. ಅಸ್ಪಷ್ಟವಾದ ವಿಚಾರಗಳನ್ನು ತಿಳಿಯುವ ಕುತೂಹಲ ನಿಮಗೆ. ಜೀವನದಲ್ಲಿ ದೃಷ್ಟಿಕೋನ ಬದಲಿಸಿದರೆ ಸಂತೋಷವಿದೆ. ನಿಮ್ಮಬುದ್ಧಿವಂತಿಕೆ ನಿಮ್ಮ ನೈಜ ಬಲ. ದಾಂಪತ್ಯದಲ್ಲಿ ಬಿರುಕು ಸರಿಯಾಗಿ ಸಂತೋಷವನ್ನು ಅನುಭವಿಸುವಿರಿ. ಓದಿನ ಕಡೆ ಮನಸ್ಸನ್ನು ಕೊಡಲಾಗದು. ನೀವು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರೆ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ನೆರೆಹೊರೆಯರ ಜೊತೆ ಹೊಂದಾಣಿಕೆಯ ಮನಃಸ್ಥಿತಿಯಲ್ಲಿಯೇ ಇರಬೇಕಾಗುವುದು. ಅತಿಯಾದ ಲೋಭವು ನಿಮ್ಮ ಕಾರ್ಯವನ್ನು ಹಾಳು ಮಾಡುವುದು. ಸಮಯಪಾಲನೆಯಿಂದ ನಿಮ್ಮ ಕೆಲಸಗಳು ಸರಿಯಾಗುವುದು. ನೀರಿನಿಂದ ಭೀತಿಯು ಉಂಟಾಗುವುದು.
ವೃಶ್ಚಿಕ ರಾಶಿ: ಸಮಯಕ್ಕೆ ಸರಿಯಾಗಿ ನಿಮ್ಮ ಹಣವನ್ನು ಪಡೆಯಲಾಗದೇ ಸಾಲ ಮಾಡಬೇಕಾಗುವುದು. ಸಿಕ್ಕಕೂಡಲೇ ಹಿಂದಿರುಗಿಸುವುದನ್ನು ಮರೆಯುವುದು ಬೇಡ. ಇಂದು ನಿಮ್ಮ ಖಾಲಿ ಮನಸ್ಸಿಗೆ ಸಲ್ಲದ ಆಲೋಚನೆಗಳು ಒಂದೊಂದಾಗಿಯೇ ಬರಬಹುದು. ಸುಮ್ಮನೇ ಕುಳಿತುಕೊಳ್ಳುವುದು ಬೇಡ. ಏನಾದರೂ ಕಾರ್ಯವನ್ನು ಮಾಡುತ್ತಲೇ ಇರಿ. ನಿಮ್ಮೊಳಗಿನ ಆಸೆಯು ಪ್ರಿಯತೆಯನ್ನು ತಣಿಸುತ್ತದೆ. ಹಣಕಾಸಿನಲ್ಲಿ ಲಾಭ, ಆದರೆ ಸಹೋದ್ಯೋಗಿಗಳಿಂದ ದೂರವಿರಲು ಪ್ರಯತ್ನಿಸಿ. ಬೆನ್ನು ನೋವು ತಪ್ಪಿಸಲು ವೈದ್ಯರ ಸಲಹೆ ಬೇಕಾದಲ್ಲಿ ತೆಗೆದುಕೊಳ್ಳಿ. ಕಾಲಕಾಲಕ್ಕೆ ನಿಟ್ಟುಸಿರು ತೆಗೆದುಕೊಳ್ಳಿ, ಇದು ಮನಸ್ಸಿಗೆ ಶಾಂತಿ ನೀಡುತ್ತದೆ. ಇಷ್ಟು ದಿನ ಮಾಡುತ್ತಿದ್ದವರ ಬಳಿಯಿಂದ ಹಣಕಾಸಿನ ವ್ಯವಹಾರವನ್ನು ಬದಲಾಯಿಸುವಿರಿ. ನಿಮ್ಮ ಕಾರ್ಯದ ವೇಗವು ಹೆಚ್ಚುವ ಅವಶ್ಯಕತೆ ಇದೆ. ಮಹಿಳೆಯ ಕಾರಣದಿಂದ ನಿಮಗೆ ಧನನಷ್ಟವು ಆಗಬಹುದು. ಭೂಮಿಯನ್ನು ನಿಮ್ಮದಾಗಿಸಿಕೊಳ್ಳುವ ಪ್ರಯತ್ನವು ಸಫಲವಾಗುವುದು. ನಿಮಗೆ ಸಪ್ಪೆ ಎನಿಸಿದ ವಿಷಯವನ್ನು ಮುಂದುವರಿಸುವುದಿಲ್ಲ.
ಧನು ರಾಶಿ: ಹುರುಳಿಲ್ಲದ ಮಾತು ನಿಮಗೆ ಮೆಚ್ಚುಗೆಯಾಗಲಿದೆ. ಇಂದು ನಿಮಗೆ ಸಹೋದ್ಯೋಗಿಗಳ ಸಹಕಾರವೂ ಸಿಕ್ಕಿ ಕಛೇರಿಯ ಇಂದಿನ ಕೆಲಸವನ್ನು ಇಂದೇ ಮಾಡುವಿರಿ. ನಿದ್ರಾಹೀನತೆಯಿಂದ ಸ್ವಲ್ಪ ಆಲಸ್ಯವೂ ಇರಲಿದೆ. ಸಂಗಾತಿಯ ಜೊತೆ ದೂರಪ್ರಯಾಣ ಮಾಡಬಹುದು. ಪ್ರೀತಿಯ ಹೊಸ ಆಯಾಮಕ್ಕೆ ಹೆಜ್ಜೆ ಹಾಕಿ. ಗಾಂಭೀರ್ಯದಿಂದ ಇರಲು ಹೆಚ್ಚು ಸಮಯ ಆಗದು. ಭಾವನೆಗಳಲ್ಲಿ ಭಾರವಿದ್ದರೆ ಏಕಾಂತ ಬೇಕು. ಕುಟುಂಬದ ಬೆಂಬಲ ನಿಮ್ಮ ಶಕ್ತಿ ಆಗಲಿದೆ. ಯಾರಿಗೂ ಕೆಟ್ಟದ್ದನ್ನು ಮನಸ್ಸಿನಲ್ಲಿಯೂ ಅಂದುಕೊಳ್ಳುವುದು ಬೇಡ. ನಿಮ್ಮ ಕಾರ್ಯದಲ್ಲಿ ತೊಡಗಿ. ಸಂಗಾತಿಯ ಹಳೆಯ ಸ್ವಭಾವ ಮರುಕಳಿಸಬಹುದು. ಹೇಗಾದರೂ, ಇಂದು ಯಾವುದೇ ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಂಗಾತಿಯ ಕಡೆಯನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಯಾರದೋ ಕಾರಣಕ್ಕೆ ನೀವು ಓಡಾಟ ಮಾಡಬೇಕಾಗುವುದು. ಅಂದುಕೊಂಡ ಕೆಲಸವನ್ನು ಪೂರೈಸಲು ನಿಮಗೆ ಸಮಸ್ಯೆಯು ಬರಬಹುದು.
ಮಕರ ರಾಶಿ: ಅನಾಯಾಸವಾಗಿ ಸಿಗುವ ಗೌರವವನ್ನು ಕಳೆದುಕೊಳ್ಳಬೇಡಿ. ಇಂದು ನಿಮಗೆ ಕಛೇರಿಯಲ್ಲಿ ಕೆಲವು ಸವಾಲಗಳು ಇರಲಿವೆ. ಒತ್ತಡಕ್ಕೆ ಸಿಲುಕದೇ ಆಪ್ತರ ಜೊತೆ ಸಮಾಲೋಚನೆ ಮಾಡಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ನೀತಿಯ ಜೊತೆಗಿನ ನಡಿಗೆ ಕಷ್ಟಕರವಾಗಬಹುದು. ಸಾಲಕೊಟ್ಟ ಹಣವು ನಿಮಗೆ ಸಿಗಲಿದೆ. ನಿರೀಕ್ಷೆಗಳಿಲ್ಲದ ಸಂಬಂಧಗಳು ನೆಮ್ಮದಿಯನ್ನು ಕೊಡುತ್ತವೆ. ಸುಮ್ಮನಿರುವ ಬದಲು, ಪ್ರೀತಿಗೆ ಸೂಕ್ತ ಆಯ್ಕೆ ಮಾಡಿ. ಹಣಕಾಸಿನಲ್ಲಿ ಹೆಚ್ಚು ಬದಲಾವಣೆ ಇಲ್ಲದಿದ್ರೂ ನಿರಾಶೆಯಾಗಬೇಡಿ. ಕೆಲಸದಲ್ಲಿ ಗುರಿ ನಿಗದಿಪಡಿಸಿ, ಕಾರ್ಯತತ್ಪರರಾಗಿರಿ. ಇದು ನಿಮಗೆ ಬಹಳ ನೋವಾಗಲಿದೆ. ಆದರೆ ಬೇಗ ತಿಳಿಯಿತು ಎಂಬ ಸಮಾಧನ ಮಾಡಿಕೊಳ್ಳಿ. ಏಕಾಗ್ರತೆಯ ಕೊರತೆ ಕಾಣಲಿದೆ. ಮನೆಯಲ್ಲಿ ಹಬ್ಬದ ವಾತಾವರಣವು ಇರಲಿದೆ. ಇಂದು ನಿಮಗೆ ಕೇಳುವ ಪ್ರಶ್ನೆಗಳಿಗೆ ಉತ್ತರವನ್ನು ಕೊಡಲಾರಿರಿ. ಧನವು ನಷ್ಟವಾದ ವಿಚಾರಗಳನ್ನು ಯಾರ ಬಳಿಯೂ ಹೇಳಲಾರಿರಿ. ತಂದೆಯ ಜೊತೆ ವಾಗ್ವಾದ ಮಾಡಿಕೊಳ್ಳುವಿರಿ.
ಕುಂಭ ರಾಶಿ: ನಿಮ್ಮ ಆಲೋಚನೆಗಳು ವ್ಯಕ್ತಿತ್ವವೇ ಬೇರೆಯಾಗುವಂತೆ ಮಾಡಬಹುದಿ. ನೀವು ಅನಾರೋಗ್ಯದಿಂದ ಆರೋಗ್ಯದ ಕಡೆಗೆ ಹಂತ ಹಂತವಾಗಿ ಕ್ರಮಿಸುವಿರಿ. ಇಂದು ನೀವಿರುವ ವಾತಾವರಣವು ನಿಮಗೆ ಹಾಯೆನಿಸಬಹುದು. ಯಾರ ಜೊತೆ ಬೆರೆಯಬೇಕು ಎನ್ನುವುದು ನಿಮ್ಮ ಬುದ್ಧಿಗೆ ಬಿಟ್ಟಿದ್ದು. ಪ್ರೀತಿಗೆ ಮುಕ್ತ ಮನಸ್ಸು ಅಗತ್ಯ. ಸಂಪರ್ಕ ಹೊಂದುವ ಪ್ರತಿಯೊಬ್ಬರಿಗೂ ಶ್ರದ್ಧೆಯಿಂದ ವರ್ತಿಸಿ. ಪ್ರಯಾಣದಲ್ಲಿ ತಂಗುದಾಣ ಮತ್ತು ಮನರಂಜನೆಗೂ ಜಾಗರೂಕರಾಗಿರಿ. ಸಂತಾನೋತ್ಪತ್ತಿ ಸಮಸ್ಯೆ ಬಂದರೆ ವಿಳಂಬವಿಲ್ಲದೆ ವೈದ್ಯರ ಬಳಿ ಹೋಗಿ. ಅದನ್ನು ಗಮನಿಸಿಕೊಳ್ಳಿ. ಹೊಸ ವಸ್ತುಗಳು ನಿಮಗೆ ಸಂತೋಷ ಕೊಡಲಿದ್ದು ಅದನ್ನೇ ಹೆಚ್ಚು ಬಳಸುವಿರಿ. ಪತಿಯ ಪ್ರೀತಿ ಇಂದು ಸಿಗಲಿದೆ. ಇಂದಿನ ದುಡಿಮೆಯು ಕಷ್ಟವೆನಿಸಬಹುದು. ನೋವಿಗೆ ಸ್ಪಂದಿಸುವ ಸ್ವಭಾವವು ನಿಮಗೆ ಇಷ್ಟವಾಗುವುದು. ಬಂಧುಗಳ ಮಾತು ನಿಮಗೆ ಕಿರಿಕಿರಿ ತರಿಸಬಹುದು. ನಿಮ್ಮ ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡುವಿರಿ.
ಮೀನ ರಾಶಿ: ಸಂತೋಷಕ್ಕಾಗಿ ಮಾರ್ಗವನ್ನು ಅನ್ವೇಷಣೆ ಮಾಡುವ ಬದಲು ಇರುವುದರಲ್ಲಿಯೇ ನೆಮ್ಮದಿಯನ್ನು ಕಾಣುವ ಕಲೆ ಬೇಕಾಗುವುದು. ಇಂದು ನಿಮಗೆ ಕೆಲವು ವಿಚಾರದಲ್ಲಿ ತಿಳಿವಳಿಕೆ ಬಂದು ಅದನ್ನು ವಿವೇಕದಿಂದ ನೋಡುವಿರಿ. ಇಂದು ನಡೆಯುವ ನಕಾರಾತ್ಮಕ ವಾರ್ತೆಯನ್ನು ಲೆಕ್ಕಿಸದೇ ನಿಮ್ಮ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ಮೋಸದ ಅನುಭವದಿಂದ ಪಾಠ ಕಲಿಯಿರಿ. ಬಾಂಧವ್ಯದ ಶೈಥಿಲ್ಯವನ್ನು ಗಟ್ಟಿ ಮಾಡಿಕೊಳ್ಳಬೇಕಿದೆ. ಪಾಠ ಕಲಿತವರು ಮುಂದೆ ಸಾಗುತ್ತಾರೆ. ಇಂದು ಸಾಲ ನಿವಾರಣೆಗೆ ಉತ್ತಮ ಸಮಯ, ಪ್ರಾಮಾಣಿಕತೆ ಕೆಲಸದಲ್ಲಿ ನಿಮ್ಮ ಶಕ್ತಿಯಾಗಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ, ಉಸಿರಾಟ ಸಮಸ್ಯೆಗೆ ಚಿಕಿತ್ಸೆ ತೆಗೆದುಕೊಳ್ಳಿ. ಭಾವನೆಗಳಲ್ಲಿ ದೃಢತೆ ಇರಲಿ. ನಿಮ್ಮ ಅಧ್ಯಯನ ಶೀಲತೆಯಲ್ಲಿ ಹಿನ್ನಡೆ ಆಗಿರುವುದು ನಿಮ್ಮ ಅರಿವಿಗೆ ಬರಲಿದೆ. ವ್ಯಾಪಾರಿಯಾಗಿದ್ದರೆ ಇಂದು ನೀವು ದೊಡ್ಡ ವ್ಯವಹಾರ ವಹಿವಾಟು ಸಿಗಲಿದೆ. ಪ್ರೀತಿಪಾತ್ರರ ಜೊತೆ ಸಂಬಂಧ ಉತ್ತಮವಾಗಿರುತ್ತದೆ. ಇಂದು ಕುಟುಂಬ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯಬಹುದು. ಆಕಸ್ಮಿಕ ಧನಪ್ರಾಪ್ತಿಯಿಂದ ಸಂತೋಷವು ಇರುವುದು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1