ಚಿತ್ರದುರ್ಗ ಜು. 18
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಮಾಜಿ ಸಚಿವರು, ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಲಿ ವಿಧಾನ ಪರಿಷತ್ವ ಸದಸ್ಯರಾದ ಸಿ.ಟಿ.ರವಿಯವರ 59ನೇ ಹುಟ್ಟು ಹಬ್ಬದ ಅಂಗವಾಗಿ ಸಿ.ಟಿ.ರವಿಯವರ ಅಭಿಮಾನಿಗಳ ಬಳಗದ ವತಿಯಿಂದ ಶನಿವಾರ ಚಿತ್ರದುರ್ಗ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ಒಳ ರೋಗಿಗಳಿಗೆ ಹಣ್ಣು, ಬ್ರಡ್ನ್ನು ಹಂಚುವುದರ ಮೂಲಕ ಅವರಿಗೆ ಶುಭ ಕೋರಲಾಯಿತು, ಇದಕ್ಕೂ ಮುನ್ನಾ ನಗರದ ಶ್ರೀ ನೀಲಕಂಠೇಶ್ವರ ದೇವಾಲಯದಲ್ಲಿ ನೀಲಕಂಠ ಸ್ವಾಮಿಗೆ ವಿಶೇಷ ಪೂಜೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಸಿ.ಟಿ.ರವಿಯವರ ಅಭಿಮಾನಿಗಳ ಬಳಗದ ಅದ್ಯಕ್ಷ ರಘು ಕೆ.ಸಿ.ಚಿಕ್ಕಗೊಂಡನಹಳ್ಳಿ, ಶಿರಾ ವಿರೇಶ್, ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಬಿಜೆಪಿ ಮುಖಂಡರಾದ ಆದರ್ಶ ಚಳ್ಳಕೆರೆ ಮಂಡಲ ಪ್ರಧಾನ ಕಾರ್ಯದರ್ಶಿ ಒಬಳೇಶ್, ಕರಿಬಸವಣ್ಣ ಜೆ.ಎನ್. ಕೋಟೆ, ರೈತ ಮುಖಂಡರಾದ ಮಹಾಂತೇಶ್ ಗೌಡ, ಚಿಕ್ಕಗೊಂಡನಹಳ್ಳಿ, ಕೃಷ್ಣ ರೆಡ್ಡಿ ಎಂ.ಟಿ. ಸಂತೋಷ ಸೇರಿದಂತೆ ಇತರರು ಭಾಗವಹಿಸಿದ್ದರು.