ಜ.ರಾ. ರಾಮಮೂರ್ತಿ ನಿಧನ

ಚಿತ್ರದುರ್ಗ, (ಫೆ.20) : ನಗರದ ಜೆಸಿಆರ್ ಬಡಾವಣೆಯ ನಿವಾಸಿ ನಿವೃತ್ತ ಮುಖ್ಯ ಇಂಜಿನಿಯರ್ ಹಾಗೂ ವಿಶ್ವ ಹಿಂದೂ ಪರಿಷತ್ ನ ಹಿರಿಯ ಮುಖಂಡ ಜ.ರಾ. ರಾಮಮೂರ್ತಿ (84) ಅವರು ಅನಾರೋಗ್ಯದಿಂದ ಬೆಂಗಳೂರಿನ ನಿವಾಸದಲ್ಲಿ ಇಂದು (ಸೋಮವಾರ) ಮುಂಜಾನೆ ಸುಮಾರು 3 ಗಂಟೆ ಸಮಯದಲ್ಲಿ ನಿಧನರಾದರು.

ಪತ್ನಿ, ಓರ್ವ ಪುತ್ರಿ, ಮೂವರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ಬೆಂಗಳೂರಿನ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಇಂದು ಬೆಳಿಗ್ಗೆ 10 : 30 ರ ವೇಳೆಗೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹೆಚ್ಚಿನ ಮಾಹಿತಿಗಾಗಿ : 9900552528 ಸಂಪರ್ಕಿಸಲು ಕೋರಿದೆ.

ಜ.ರಾ.ರಾಮಮೂರ್ತಿಯವರು ವಿಶ್ವ ಹಿಂದೂ ಪರಿಷತ್ ನ ಕರ್ಣಾಟಕ ಪ್ರಾಂತ ಸಮಿತಿ ಸದಸ್ಯರು ಹಾಗೂ ಚಿತ್ರದುರ್ಗದ ಹಿಂದೂ ಮಹಾಗಣಪತಿಯ ಮಾರ್ಗದರ್ಶಕರು, ಗೌರವ ಅಧ್ಯಕ್ಷರು, ವಿಶ್ವ ಹಿಂದೂ ಪರಿಷತ್ ವೀರ ಮದಕರಿ ಸೇವಾ ಟ್ರಸ್ಟ್ ನ ಅಧ್ಯಕ್ಷರು ಆಗಿ ಕಾರ್ಯನಿರ್ವಹಿಸಿದ್ದರು.

ಜ.ರಾ.ರಾಮಮೂರ್ತಿಯವರ ನಿಧನಕ್ಕೆ ಹಿಂದೂ ಮುಖಂಡರು, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಮಹಾಗಣಪತಿ ಸಮಿತಿ ಸದಸ್ಯರು, ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು ಕಂಬನಿ ಮಿಡಿದಿದ್ದಾರೆ.

The post ಜ.ರಾ. ರಾಮಮೂರ್ತಿ ನಿಧನ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/TOmyKxa
via IFTTT

Leave a Reply

Your email address will not be published. Required fields are marked *