ಶಾಮನೂರು ನುಡಿ ನಮನ ಸಮಾರಂಭದಲ್ಲಿ ಎ.ರೇಖಾಗೆ ರಾಷ್ಟ್ರೀಯ ‘ಮಹಿಳಾ ರತ್ನ ಪ್ರಶಸ್ತಿ’ ಗೌರವ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 02

ಅದ್ವೈತ ನ್ಯಾಷನಲ್ ಸೇವಾ ಫೌಂಡೆಷನ್, ಡ್ರೀಮ್ ಪಿಕ್ ಎಂಟರ್ ಪ್ರೈಸಸ್ ಅಖಿಲ ಭಾರತ ವಿಶ್ವಕರ್ಮ ಪರುಷತ್‍ವತಿಯಿಂದ ಜ. 31ರ ಭಾನುವಾರ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಶಾಮನೂರು ನುಡಿ ನಮನ ಹಾಗೂ ಸರ್ವ ಧರ್ಮ ಸಮ್ಮೇಳನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರಧಾನದಲ್ಲಿ ಚಿತ್ರದುರ್ಗ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಾರ್ಯದರ್ಶಿಯಾದ ಶ್ರೀಮತಿ ಎ.ರೇಖಾ ರವರಿಗೆ ಮಹಿಳಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಈ ಸಂದರ್ಭದಲ್ಲಿ ಧರ್ಮಸ್ಥಳಯ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆ ಸೇರಿದಂತೆ ರಾಜ್ಯದ ವಿವಿಧ ಗಣ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *