ಚಿತ್ರದುರ್ಗ ಏ. 11
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಇಂದಿನ ದಿನಮಾನದಲ್ಲಿ ಮಾತೃ ಭಾಷೆಯ ಜೊತೆಗೆ ಆಂಗ್ಲ ಭಾಷೆಯ ಕಲಿಕೆಯೂ ಸಹ ಅಗತ್ಯವಾಗಿದೆ. ಮಾತೃ ಭಾಷೆಯನ್ನು ಕಲಿತರೆ ನಮ್ಮ ರಾಜ್ಯದಲ್ಲಿ ಮಾತ್ರ ಸೀಮಿತವಾಗುತ್ತದೆ. ಆದರೆ ಅಂಗ್ಲ ಭಾಷೆಯನ್ನು ಕಲಿತರೆ ದೇಶದ ಯಾವ ಭಾಗದಲ್ಲಿಯಾದರೂ ಸಹ ನಾವುಗಳು ಜೀವನವನ್ನು ಮಾಡಬಹುದಾಗಿದೆ ಎಂದು ಯೋಗೀಶ್ ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್ (ರಿ.) ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿ ತಿಳಿಸಿದರು.



ಚಿತ್ರದುರ್ಗ ನಗರದಲ್ಲಿ ಈ ವರ್ಷ ಬೇಸಿಗೆ ರಜೆಯಲ್ಲಿ ಯೋಗೀಶ್ ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್ (ರಿ.) ವತಿಯಿಂದ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಬಿ.ಡಿ. ರಸ್ತೆಯ ನೂತನ ಬ್ರ್ಯಾಂಚ್ನಲ್ಲಿ ಹಮ್ಮಿಕೊಂಡಿದ್ದ 2026ರ ಸ್ಪೋಕನ್ ಇಂಗ್ಲಿಷ್ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಂಗ್ಲ ಭಾಷೆಯನ್ನು ಬ್ರಿಟೀಷರು ಬಿಟ್ಟು ಹೋದ ಭಾಷೆ ಎಂದು ಹಲವಾರು ಜನತೆ ಆಡಿಕೊಳ್ಳುತ್ತಾರೆ ಆದರೆ ಅಂದಿನ ದಿನಮಾನದಲ್ಲಿ ಅದು ಅವರ ಮಾತೃ ಭಾಷೆಯಾಗಿತ್ತು. ಹಾಗಾಗಿ ಅವರು ಅದನ್ನು ಬಳಸುತ್ತಿದ್ದರು, ಇದರ ಹಿಂದೆ ಬಿದ್ದ ನಮ್ಮವರು ಸಹ ಈ ಭಾಷೆಯನ್ನೇ ಹೆಚ್ಚಾಗಿ ಬಳಕೆ ಮಾಡುವುದನ್ನು ಕಲಿತರು. ಇದರಿಂದ ಈ ಭಾಷೆ ವಿಶ್ವದ ಭಾಷೆಯಾಗಿ ಬೆಳೆದಿದೆ, ಇದರಿಂದ ಈ ಭಾಷೆಯನ್ನು ಕಲಿತರೆ ಎಲ್ಲಿಯಾದರೂ ಜೀವನ ಮಾಡಬಹುದಾಗಿದೆ. ನಮ್ಮ ಮಾತೃ ಭಾಷೆಯ ಜೊತೆಗೆ ಆಂಗ್ಲ ಭಾಷೆಯನ್ನು ಕಲಿಯುವುದರ ಮೂಲಕ ಉತ್ತಮವಾದ ಬದುಕನ್ನು ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ನಮ್ಮ ಸಂಸ್ಥೆಯ ವತಿಯಿಂದ ಹಲವಾರು ವರ್ಷದಿಂದ ಮಕ್ಕಳಿಗೆ ಬೇಸಿಗೆ ಸಮಯದಲ್ಲಿ ಸ್ಪೋಕನ್ ಇಂಗ್ಲಿಷ್ ಬೇಸಿಗೆ ಶಿಬಿರವನ್ನು ನಡೆಸಲಾಗುತ್ತಿದೆ. ಇದರ ಪ್ರಯೋಜವನ್ನು ಹಲವಾರು ಮಕ್ಕಳು ಪಡೆಯುತ್ತಿದ್ದಾರೆ. ಆಂಗ್ಲ ಭಾಷೆಯನ್ನು ಸರಿಯಾದ ರೀತಿಯಲ್ಲಿ ಮಾತನಾಡಲು ಕಲಿಯವುದರ ಮೂಲಕ ಅವರ ಮುಂದಿನ ಭವಿಷ್ಯ ಉತ್ತಮವಾಗಿ ಇರಲು ಸಾಧ್ಯವಿದೆ. ಈ ಹಿನ್ನಲೆಯಲ್ಲಿ ನಮ್ಮ ಸಂಸ್ಥೆಯಲ್ಲಿ ಕಲಿತ ಹಲವಾರು ಮಕ್ಕಳು ಇಂದು ಉತ್ತಮವಾದ ಸ್ಥಾನದಲ್ಲಿ ಇದ್ದಾರೆ ಎಂದು ಯೋಗೀಶ್ ಸಹ್ಯಾದ್ರಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಯೋಗೀಶ್ ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಚೈತ್ರ.ಸಿ ಹಾಗೂ ಪೋಷಕರಾದ ಜ್ಯೋತಿ ಶಂಕರಮೂರ್ತಿ, ಪಲ್ಲವಿ ರಾಜ್, ತಿಮ್ಮಯ್ಯ ಪಿ.ಜಿ, ಅಶೋಕ್. ಹೆಚ್, ಕಛೇರಿ ಸಿಬ್ಬಂದಿ ವಿನೋದ.ಸಿ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.